ಭೋಪಾಲ್: ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಅಂಬಾ ಗ್ರಾಮದಲ್ಲಿ ಆಯೋಜಿಸಲಾದ ಶಿವ ಮಹಾಪುರಾಣ ಕಥೆಯಿಂದ ಪ್ರೇರಿತರಾದ 18 ಮಂದಿ ಮುಸ್ಲಿಮರು ಕಾರ್ಯಕ್ರಮ ಮುಕ್ತಾಯವಾದ ಬಳಿಕ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.
ಗುರುವಾರ ಮುಕ್ತಾಯಗೊಂಡ ಶಿವಪುರಾಣದ ಕಥೆಯನ್ನು ಪಂಡಿತ್ ಜಿತೇಂದ್ರ ರಾವಲ್ ನಡೆಸಿಕೊಟ್ಟಿದ್ದರು. ಹಳ್ಳಿಯ ಅನೇಕ ಮುಸಲ್ಮಾನರೂ ಈ ಕಥೆಯನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.
ಶಿವ ಪುರಾಣ ಕಥೆಯು ಅವರ ಮೇಲೆ ಎಷ್ಟು ಪ್ರಭಾವ ಬೀರಿತು ಎಂದರೆ ಕಥೆಯ ಮುಕ್ತಾಯದ ನಂತರ 18 ಮಂದಿ ಪಂಡಿತ್ ರಾವಲ್ ಬಳಿ ಹೋಗಿ ಸನಾತನ ಧರ್ಮವನ್ನು ಸೇರುವ ಇಚ್ಛೆ ವ್ಯಕ್ತಪಡಿಸಿದರು ಎಂದ ಮೂಲಗಳು ತಿಳಿಸಿವೆ.
ರಾವಲ್ ಅವರು ಇವರ ಶುದ್ಧೀಕರಣಕ್ಕಾಗಿ ಸ್ವಾಮಿ ಆನಂದಗಿರಿ ಮಹಾರಾಜ್ ಅವರೊಂದಿಗೆ ಚರ್ಚಿಸಿ ನಿಯಮಗಳ ಪ್ರಕಾರ ಅಫಿಡವಿಟ್ ಅನ್ನು ಸಿದ್ಧಪಡಿಸುವಂತೆ ಸೂಚಿಸಿದ್ದರು.
ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಬದಲಾದ ಹದಿನೆಂಟು ಜನರು ಶುಕ್ರವಾರ ಬೆಳಿಗ್ಗೆ ಸ್ನಾನ ಮಾಡಿದ ಮರುದಿನವನ್ನು ಅಂಬಾದಲ್ಲಿರುವ ಭೀಮನಾಥ ಮಹಾದೇವ ದೇವಸ್ಥಾನದಲ್ಲಿ ಪ್ರಾರ್ಥನೆ ಮತ್ತು ಅಭಿಷೇಕವನ್ನು ನೆರವೇರಿಸಿದ್ದಾರೆ.
ಗುರುವಾರ ಎಲ್ಲರೂ ಮುಸ್ಲಿಂ ಧರ್ಮ ತೊರೆದಿದ್ದರು. ಮಹಾಶಿವಪುರಾಣ ಮುಗಿದ ಮೇಲೆ ಸ್ವಾಮಿ ಆನಂದಗಿರಿ ಮಹಾರಾಜರ ಸಮ್ಮುಖದಲ್ಲಿ ಎಲ್ಲರೂ ಗೋಮೂತ್ರದಿಂದ ಸ್ನಾನ ಮಾಡಿ ಪವಿತ್ರ ದಾರವನ್ನು ಧರಿಸಿದರು ಎನ್ನಲಾಗಿದೆ.
ಈ 18 ಮಂದಿ ಯಾವತ್ತೂ ಮಸೀದಿಗೆ ಹೋಗಿರಲಿಲ್ಲ. ಕೆಲವೊಮ್ಮೆ ದರ್ಗಾಗೆ ಹೋಗುತ್ತಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.