ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದ ಪ್ರಮುಖ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು 17 ರಾಷ್ಟ್ರೀಯ ರೈಫಲ್ಸ್ ಪಡೆ ಜೊತೆಗೂಡಿ ಕಿಶ್ತ್ವಾರ್ನ ನಾಗಸಿನಿ ತೆಹ್ಸಿಲ್ನ ರಾಶ್ಗ್ವಾರಿ ಪದ್ಯಾರ್ನಾ ನಿವಾಸಿ ನೂರ್ ಮೊಹಮ್ಮದ್ನ ಮಗ ತಾಲಿಬ್ ಹುಸೇನ್ ಗುಜ್ಜರ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲಿಬ್ ತನ್ನ ಗುರುತನ್ನು ಬದಲಾಯಿಸಿ ಕಿಶ್ತ್ವಾರ್ ಅನ್ನು ತೊರೆಯಲು ಪ್ರಯತ್ನಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ.
ವರದಿಗಳ ಪ್ರಕಾರ, ಈ ಪರ್ವತ ಜಿಲ್ಲೆಯಲ್ಲಿ ಹೊಸದಾಗಿ ನೇಮಕಾತಿ ಮಾಡುವ ಮೂಲಕ ತನ್ನ ಕಾರ್ಯಕರ್ತರನ್ನು ಮರುಸಂಘಟಿಸಲು ಮತ್ತು ಬಲಪಡಿಸಲು ಪಾಕಿಸ್ಥಾನ ಮೂಲದ ಹಿಜ್ಬುಲ್ ಹವಣಿಸುತ್ತಿದೆ. ಇದಕ್ಕಾಗಿ ತಾಲಿಬ್ಗೆ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿತ್ತು. ಇದೀಗ ತಾಲಿಬ್ ಗುಜ್ಜರ್ ಬಂಧನ ಹಿಜ್ಬುಲ್ಗೆ ಖಂಡಿತವಾಗಿಯೂ ದೊಡ್ಡ ಹಿನ್ನಡೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಲಿಬ್ ಗುಜ್ಜರ್ ಜುಲೈ 2016 ರಲ್ಲಿ ನಿಗೂಢವಾಗಿ ಕಣ್ಮರೆಯಾದಾಗ, ಅವರ ಕುಟುಂಬ ಸದಸ್ಯರು ಪೊಲೀಸ್ ಪೋಸ್ಟ್ ಪದ್ಯಾರಣದಲ್ಲಿ ದೂರನ್ನು ಸಲ್ಲಿಸಿದ್ದರು, ನಂತರ ಈತನನ್ನ ಹಿಜ್ಬುಲ್ ಮುಜಾಹಿದೀನ್ನೊಂದಿಗೆ ಸಕ್ರಿಯ ಉಗ್ರಗಾಮಿ ಎಂದು ಘೋಷಿಸಲಾಯಿತು. ಆ ಬಳಿಕ ಆತ ಸಾಕಷ್ಟು ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.