ಪಣಜಿ: ನಮ್ಮ ದೇಶದ ಹೆಚ್ಚಿನ ಇತಿಹಾಸ ಪಾಶ್ಚಿಮಾತ್ಯ ಪ್ರಚಾರದ ಬಲವಂತದ ಹೇರಿಕೆಯಾಗಿದೆ. ವೀರ್ ಸಾವರ್ಕರ್ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಅಸಾಧಾರಣ ನಾಯಕ, ಆದರೂ ಒಂದು ವರ್ಗದ ಜನರು ಅವರ ವಿರುದ್ಧ ಸುಳ್ಳು ಮತ್ತು ದ್ವೇಷವನ್ನು ಹರಡಿದ್ದಾರೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಗೋವಾ ಸರ್ಕಾರವು ಸಾವರ್ಕರ್ ಅವರ ಪುಸ್ತಕಗಳನ್ನು ಮರುಮುದ್ರಣ ಮಾಡುತ್ತದೆ ಮತ್ತು ಗೋವಾದಾದ್ಯಂತ ಗ್ರಂಥಾಲಯಗಳಲ್ಲಿ ವಿತರಿಸುತ್ತದೆ ಎಂದು ಸಾವಂತ್ ಭಾನುವಾರ ಗೋವಾದಲ್ಲಿ ನಡೆದ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಹೇಳಿದ್ದಾರೆ.
“ವೀರ್ ಸಾವರ್ಕರ್ ಒಬ್ಬ ಕಡೆಗಣನೆಗೆ ಒಳಗಾದ ವೀರ, ಅವರು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದರು ಮತ್ತು ಅತ್ಯಂತ ಕ್ರೂರ ಶಿಕ್ಷೆಯನ್ನು ಎದುರಿಸಿದರು. ಸಾವರ್ಕರ್ ಅವರ ‘1857 ಚೇ ಸ್ವತಂತ್ರ ಸಮರ್’ ಮತ್ತು ‘ಗೋಮಾಂತಕ್’ ಪುಸ್ತಕಗಳನ್ನು ತಕ್ಷಣವೇ ಮರುಮುದ್ರಣ ಮಾಡಲು ಗೋವಾ ಸರ್ಕಾರವು ಮುಂದಾಗುತ್ತದೆ ಮತ್ತು ಈ ಪುಸ್ತಕಗಳನ್ನು ಗೋವಾದ ಎಲ್ಲಾ ಗ್ರಂಥಾಲಯಗಳಲ್ಲಿ ಪ್ರಸಾರ ಮಾಡುತ್ತದೆ ”ಎಂದಿದ್ದಾರೆ.
ಸಾವರ್ಕರ್ ಅವರ ‘ಗೋಮಾಂತಕ್’ ಪುಸ್ತಕವು ಪೋರ್ಚುಗೀಸ್ ವಸಾಹತುಶಾಹಿ ದಬ್ಬಾಳಿಕೆಯ ಅಡಿಯಲ್ಲಿ ಗೋವಾದವರ ದುಃಸ್ಥಿತಿಯನ್ನು ವಿವರಿಸುತ್ತದೆ. ನಾಲ್ಕು ಶತಮಾನಗಳ ಕಾಲ ಪೋರ್ಚುಗೀಸ್ ಆಡಳಿತದಲ್ಲಿದ್ದರೂ ಗೋವಾ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದಿದ್ದಾರೆ.
ಇತಿಹಾಸವು ಗತಕಾಲದ ಘಟನೆಗಳ ಸ್ವತಂತ್ರ ಪ್ರಾತಿನಿಧ್ಯವಾಗಬೇಕಿತ್ತು, ಆದರೆ ಹಾಗಾಗಲಿಲ್ಲ ಎಂಬುದು ದುರಾಷೃಷ್ಟ ಎಂದರು.
ನಮ್ಮ ದೇಶದಲ್ಲಿ, ನಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟ ಇತಿಹಾಸವು ಪಶ್ಚಿಮದ ಪ್ರಚಾರವಾಗಿದೆ ಮತ್ತು ಅವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅವರು ನಮ್ಮನ್ನು ಹಾವಾಡಿಗರ ನಾಡು ಎಂದು ಭಾವಿಸಿದ್ದರು, ಅವರು ನಮ್ಮನ್ನು ಬಡವರ ದೇಶ ಎಂದು ಭಾವಿಸಿದ್ದರು. ಆದರೆ ನನ್ನ ಪ್ರಶ್ನೆ ಏನೆಂದರೆ, ನಾವು ಬಡವರಾಗಿದ್ದರಿಂದ ಅವರು ನಮ್ಮ ಮೇಲೆ ದಾಳಿ ಮಾಡಿದರೇ? ಉತ್ತರ ಖಂಡಿತವಾಗಿಯೂ ಇಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.