ಸಿಲ್ಚಾರ್: ಉಗ್ರಗಾಮಿ ಸಂಘಟನೆ ಆಲ್ ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿ (ಎಎಎನ್ಎಲ್ಎ)ಯ 13 ಸದಸ್ಯರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಅಸ್ಸಾಂ ಪೊಲೀಸ್, ಅಸ್ಸಾಂ ರೈಫಲ್ಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (20 ನೇ ಬೆಟಾಲಿಯನ್) ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 13 ಕಾರ್ಯಕರ್ತರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಕರ್ಬಿ ಆಂಗ್ಲಾಂಗ್ನ ಬೊಕಾಜಾನ್ನಲ್ಲಿ ಶರಣಾಗಿದ್ದಾರೆ ಎಂದು ಅಸ್ಸಾಂನ ವಿಶೇಷ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಜ್ಞಾನೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಶರಣಾದ ಉಗ್ರರ ಶಸ್ತ್ರಾಸ್ತ್ರಗಳಲ್ಲಿ ನಾಲ್ಕು ಎಕೆ ಸಿರೀಸ್ ರೈಫಲ್ಗಳು, ನಾಲ್ಕು ಪಿಸ್ತೂಲ್ಗಳು, ಒಂದು ರಿವಾಲ್ವರ್ ಮತ್ತು ಹಲವಾರು ಸುತ್ತಿನ ಮದ್ದುಗುಂಡುಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
“ಈ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಉದ್ದೇಶದಿಂದ ತಪ್ಪು ದಾರಿಯನ್ನು ಆರಿಸಿಕೊಂಡ ಯುವಕರನ್ನು ಮತ್ತೆ ಮುಖ್ಯವಾಹಿನಿಗೆ ಸೇರುವುದನ್ನು ನಾವು ಸ್ವಾಗತಿಸುತ್ತೇವೆ. ನಾವು ಅವರ ನಿರ್ಧಾರವನ್ನು ಅಭಿನಂದಿಸುತ್ತೇವೆ ಮತ್ತು ಅವರ ಸಂತೋಷ ಮತ್ತು ಶಾಂತಿಯುತ ಜೀವನವನ್ನು ಬಯಸುತ್ತೇವೆ” ಎಂದು ಅಸ್ಸಾಂ ರೈಫಲ್ಸ್ ಹೇಳಿದೆ.
ಅಮಿತ್ ಶಾ ಅವರ ಅಸ್ಸಾಂ ಭೇಟಿಯ ಒಂದು ದಿನ ಮುಂಚೆ ಈ ಬೆಳವಣಿಗೆ ನಡೆದಿದ್ದು ಗಮನಾರ್ಹ.
Moved by call of peace by @CMOfficeAssam Hon @himantabiswa ji, 13 cadres of militant group AANLA left path of violence today in presence of @assampolice @official_dgar @crpfindia officials at Bokajan PS @karbianglongpol pic.twitter.com/uCRTJtJMps
— GP Singh (@gpsinghips) May 8, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.