ನವದೆಹಲಿ: ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಇಂದು ನೆಟ್ಫ್ಲಿಕ್ಸ್ ಇಂಡಿಯಾ ಸಹಯೋಗದೊಂದಿಗೆ ‘ಆಜಾದಿ ಕಿ ಅಮೃತ್ ಕಹಾನಿಯಾ’ ಎಂಬ ಕಿರು ವೀಡಿಯೊ ಸಂಗ್ರಹವನ್ನು ಬಿಡುಗಡೆ ಮಾಡಿದರು. ಇದು ಭಾರತಕ್ಕಾಗಿ ಅಸಾಧಾರಣ ಸೇವೆ ಮಾಡಿದ ಏಳು ಭಾರತೀಯ ಮಹಿಳೆಯರ ಸ್ಪೂರ್ತಿದಾಯಕ ಸಣ್ಣ ಕಥೆಗಳ ಸರಣಿಯನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್, ದೇಶಾದ್ಯಂತ ಜನರನ್ನು ಪ್ರೇರೇಪಿಸುವ ಮಹಿಳೆಯರು ಮತ್ತು ಇತರರ ಸಾಧನೆಯನ್ನು ಪ್ರಚುರಪಡಿಸಲು ಈ ಉಪಕ್ರಮವನ್ನು ತರಲಾಗಿದೆ ಎಂದು ಹೇಳಿದರು.
ನೆಟ್ಫ್ಲಿಕ್ಸ್ ಇಂಡಿಯಾದ ‘ಆಜಾದಿ ಕಿ ಅಮೃತ್ ಕಹಾನಿಯ’ ಸರಣಿಯಲ್ಲಿ ಕಾಣಿಸಿಕೊಂಡ ಸ್ಪೂರ್ತಿದಾಯಕ ಭಾರತೀಯ ಮಹಿಳೆಯರನ್ನು ಸಚಿವರು ಅಭಿನಂದಿಸಿದರು. ವಿಡಿಯೋದಲ್ಲಿ ಪರಿಸರವಾದಿ ಹಾಗೂ ಪದ್ಮ ಪ್ರಶಸ್ತಿ ಪುರಸ್ಕೃತೆ ಬಸಂತಿ ದೇವಿ ಕಾಣಿಸಿಕೊಂಡಿದ್ದಾರೆ. ಉತ್ತರಾಖಂಡದಲ್ಲಿ ಕೋಸಿ ನದಿಯನ್ನು ಬತ್ತಿ ಹೋಗದಂತೆ ಜಾಗೃತಿ ಅಭಿಯಾನಗಳನ್ನು ನಡೆಸಿ ರಕ್ಷಿಸಿದ ಕೀರ್ತಿ ಆಕೆಗೆ ಸಲ್ಲುತ್ತದೆ. ಚಿಕ್ಕ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಇನ್ನೊಬ್ಬ ಮಹಿಳೆ ಅಂಶು ಜಮ್ಸೆನ್ಪಾ. ಅವರು ಪರ್ವತಾರೋಹಿ ಮತ್ತು ಒಂದು ಋತುವಿನಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ವಿಶ್ವದ ಮೊದಲ ಮಹಿಳೆ ಮತ್ತು ಐದು ದಿನಗಳಲ್ಲಿ ಅತಿ ವೇಗದಲ್ಲಿ ಶಿಖರವನ್ನು ಏರಿದಾಕೆ
ಕಿರು ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಮತ್ತೋರ್ವ ಮಹಿಳ ಹರ್ಷಿಣಿ ಕನ್ಹೇಕರ್ . ಇವರು ಪ್ರಧಾನಿ ನರೇಂದ್ರ ಮೋದಿಯವರ ‘ಭಾರತ್ ಕಿ ಲಕ್ಷ್ಮಿ’ ಅಭಿಯಾನದ ಅಡಿಯಲ್ಲಿ ಗುರುತಿಸಲ್ಪಟ್ಟ ಮತ್ತು ಗೌರವಿಸಲ್ಪಟ್ಟ ಮಹಿಳೆಯರ ಪಟ್ಟಿಗೆ ಸೇರ್ಪಡೆಗೊಂಡ ಭಾರತದ ಮೊದಲ ಮಹಿಳಾ ಅಗ್ನಿಶಾಮಕ ದಳದವರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.