ನವದೆಹಲಿ: ದೇಶಾದ್ಯಂತ ನವೋದ್ಯಮಿಗಳು ಮತ್ತು ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ, ಅಟಲ್ ಇನ್ನೋವೇಶನ್ ಮಿಷನ್, ನೀತಿ ಆಯೋಗ ತನ್ನ ಮೊದಲ ದೇಶೀಯ ಆವಿಷ್ಕಾರ ಕಾರ್ಯಕ್ರಮ (ವರ್ನಾಕ್ಯುಲರ್ ಇನ್ನೋವೇಶನ್ ಪ್ರೋಗ್ರಾಂ)ವನ್ನು ಹೊರ ತಂದಿದ.
ಈ ಕಾರ್ಯಕ್ರಮವು ಭಾರತ ಸರ್ಕಾರದ 22 ಅನುಸೂಚಿತ ಭಾಷೆಗಳಲ್ಲಿ ನಾವೀನ್ಯತಾ ಪರಿಸರ ವ್ಯವಸ್ಥೆಗೆ ಭಾರತದಲ್ಲಿನ ನವೋದ್ಯಮಿಗಳು ಮತ್ತು ಉದ್ಯಮಿಗಳಿಗೆ ಪ್ರವೇಶವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಒಬ್ಬರ ಭಾಷೆ ಮತ್ತು ಸಂಸ್ಕೃತಿಯಲ್ಲಿ ಕಲಿಕೆಗೆ ಪ್ರವೇಶವನ್ನು ಒದಗಿಸುವ ಮೂಲಕ ಅಟಲ್ ಇನ್ನೋವೇಶನ್ ಮಿಷನ್ ದೇಶೀಯ ನಾವೀನ್ಯಕಾರರಿಗೆ ಸಮಾನ ಅವಕಾಶವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
ವರ್ನಾಕ್ಯುಲರ್ ಇನ್ನೋವೇಶನ್ ಪ್ರೋಗ್ರಾಂಗೆ ಅಗತ್ಯವಾದ ಸಾಮರ್ಥ್ಯವನ್ನು ನಿರ್ಮಿಸಲು ಅಟಲ್ ಇನ್ನೋವೇಶನ್ ಮಿಷನ್ ಪ್ರತಿ 22 ನಿಗದಿತ ಭಾಷೆಗಳಲ್ಲಿ ಸ್ಥಳೀಯ ಕಾರ್ಯಪಡೆಗೆ ತರಬೇತಿ ನೀಡಲಿದೆ. ಪ್ರತಿಯೊಂದು ಕಾರ್ಯಪಡೆಯು ಸ್ಥಳೀಯ ಭಾಷಾ ಶಿಕ್ಷಕರು, ವಿಷಯ ತಜ್ಞರು, ತಾಂತ್ರಿಕ ಬರಹಗಾರರು ಮತ್ತು ಪ್ರಾದೇಶಿಕ ಅಟಲ್ ಇನ್ಕ್ಯುಬೇಶನ್ ಕೇಂದ್ರಗಳ ನಾಯಕತ್ವವನ್ನು ಒಳಗೊಂಡಿರುತ್ತದೆ.
ವರ್ನಾಕ್ಯುಲರ್ ಇನ್ನೋವೇಶನ್ ಪ್ರೋಗ್ರಾಂ ಅನ್ನು ಬಿಡುಗಡೆ ಮಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ ರಾಜೀವ್ ಕುಮಾರ್, ಈ ಉಪಕ್ರಮದ ಮೂಲಕ ಹೊಸತನವನ್ನು ತಳಮಟ್ಟದವರೆಗೆ ಕೊಂಡೊಯ್ಯಲಾಗುವುದು. ಈ ಮೂಲಕ ಆವಿಷ್ಕಾರವು ಜನ ಆಂದೋಲನವಾಗಬೇಕಿದೆ, ಏಕೆಂದರೆ ಜನರು ಇಂಗ್ಲಿಷ್ಗಿಂತ ತಮ್ಮ ಮಾತೃಭಾಷೆಯಲ್ಲಿ ಯೋಚಿಸಿದಾಗ ಹೆಚ್ಚು ಸೃಜನಶೀಲರಾಗುತ್ತಾರೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೀತಿ ಆಯೋಗ ಸಿಇಒ ಅಮಿತಾಭ್ ಕಾಂತ್, ಭಾರತದ ಭಾಷೆಗಳ ವೈವಿಧ್ಯತೆಯು ತಡೆಯಲ್ಲ ಅವಕಾಶವಾಗಿದೆ. ದೇಶದ ಹೆಚ್ಚಿನ ಜನಸಂಖ್ಯೆಯು ಪ್ರಾಥಮಿಕವಾಗಿ ಸ್ಥಳೀಯ ಭಾಷೆಗಳನ್ನು ಮಾತನಾಡುವುದರಿಂದ ಕಾರ್ಯಕ್ರಮವು ಕ್ರಾಂತಿಕಾರಿಯಾಗಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.