ನವದೆಹಲಿ: ಸಮಾಜವಾದಿ ಪಕ್ಷದ ಭದ್ರಕೋಟೆಯಾದ ಅಜಂಗಢದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಮಾಫಿಯಾ-ರಾಜ್, ಜಾತಿವಾದ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣ ರಾಜ್ಯದಲ್ಲಿ ಅಂತ್ಯಗೊಂಡಿದೆ ಎಂದು ಹೇಳಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಎರಡು ದಿನಗಳ ಯುಪಿ ಪ್ರವಾಸ ಕೈಗೊಂಡಿರುವ ಶಾ, ಸಿಎಂ ಯೋಗಿ ಅವರ ಆಡಳಿತದಲ್ಲಿ ಅಜಂಗಢ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
“ಯೋಗಿ ಸರ್ಕಾರದ ಅಡಿಯಲ್ಲಿ ಅಜಂಗಢವು ಪರಿವರ್ತನೆಗೆ ಸಾಕ್ಷಿಯಾಗಿದೆ. ಸಿಎಂ ಆದಿತ್ಯನಾಥ್ ನೇತೃತ್ವದಲ್ಲಿ ‘ಮಾಫಿಯಾ-ರಾಜ್’ ಅಂತ್ಯಗೊಂಡಿದೆ,” ಎಂದಿದ್ದಾರೆ.
“ಪ್ರಸ್ತುತ ಯುಪಿ ಸರ್ಕಾರದ ಅವಧಿಯಲ್ಲಿ ನಿರುದ್ಯೋಗ ದರ ಕಡಿಮೆಯಾಗಿದೆ. 2015 ರ ಮೊದಲು, ಯುಪಿಯ ಆರ್ಥಿಕತೆಯು ದೇಶದಲ್ಲಿ 6 ನೇ ಸ್ಥಾನದಲ್ಲಿತ್ತು ಮತ್ತು ಇಂದು ಅದು 2ನೇ ಸ್ಥಾನದಲ್ಲಿದೆ. ನಿರುದ್ಯೋಗ ದರ 4.1% ಕ್ಕೆ ಇಳಿಕೆಯಾಗಿದೆ. 40 ವೈದ್ಯಕೀಯ ಕಾಲೇಜುಗಳಿವೆ, ವೈದ್ಯಕೀಯ ಸೀಟುಗಳು 3800 ಕ್ಕೆ ಏರಿದೆ” ಎಂದು ಶಾ ಹೇಳಿದ್ದಾರೆ.
ಅವರು ಅಜಂಗಢದಲ್ಲಿ ರಾಜ್ಯ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆಯನ್ನೂ ಮಾಡಿದರು. ಗಮನಿಸಬೇಕಾದ ಸಂಗತಿಯೆಂದರೆ, ಅಜಂಗಢ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಲೋಕಸಭಾ ಕ್ಷೇತ್ರವಾಗಿದೆ. ಹೊಸ ವಿಶ್ವವಿದ್ಯಾನಿಲಯಕ್ಕೆ ಮಹಾರಾಜ ಸುಹೇಲ್ದೇವ್ ಹೆಸರಿಡುವಂತೆ ರ್ಯಾಲಿಯಲ್ಲಿ ಉಪಸ್ಥಿತರಿದ್ದ ಆದಿತ್ಯನಾಥ್ಗೆ ಶಾ ಸಲಹೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.