ನವದೆಹಲಿ: ನವೆಂಬರ್ 15 ರಂದು ಕಾಶಿಯಲ್ಲಿ ತಾಯಿ ಅನ್ನಪೂರ್ಣ ದೇವಿ ಮೂರ್ತಿಯ ‘ಪ್ರಾಣ ಪ್ರತಿಷ್ಠೆʼಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಮಾರು 100 ವರ್ಷಗಳ ಹಿಂದೆ ವಾರಣಾಸಿಯಿಂದ ಕದಿಯಲಾಗಿದ್ದ ಅನ್ನಪೂರ್ಣ ಮಾತೆಯ ಪ್ರತಿಮೆಯನ್ನು ಇತ್ತೀಚೆಗೆ ಕೆನಡಾದಿಂದ ವಾಪಾಸ್ ತರಲಾಗಿದ್ದು, ಇದು ಅನ್ನಪೂರ್ಣ ದೇವಿಯ ಅಪರೂಪದ ವಿಗ್ರಹವಾಗಿದೆ. ಭಾರತವು ಅಕ್ಟೋಬರ್ 15 ರಂದು ಕೆನಡಾದಿಂದ ಈ ವಿಗ್ರಹವನ್ನು ಸ್ವೀಕರಿಸಿತ್ತು.
ನವೆಂಬರ್ 15 ರಂದು ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಯುಪಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ತಿ ಹೇಳಿದ್ದಾರೆ.
“ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಕ್ಷಣವಾಗಿದೆ, ಕಾಸ್ಗಂಜ್, ಕಾನ್ಪುರ, ಅಯೋಧ್ಯೆ ಮತ್ತು ಕಾಶಿ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಮಾತೆ ಅನ್ನಪೂರ್ಣ ಪ್ರತಿಮೆಯನ್ನು ಸಡಗರದಿಂದ ಬರಮಾಡಿಕೊಳ್ಳಲಾಗುವುದು. ಜನರಿಗೆ ದರ್ಶನ ಮಾಡಲು ಅವಕಾಶವನ್ನು ನೀಡಲಾಗುವುದು” ಎಂದು ಅವರು ಹೇಳಿದ್ದಾರೆ.
18ನೇ ಶತಮಾನದ ಮಾತೆ ಅನ್ನಪೂರ್ಣೆಯ ವಿಗ್ರಹವನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಹಲವಾರು ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರು ನವದೆಹಲಿಯಲ್ಲಿ ಭಾಗವಹಿಸಿದ್ದರು.
ಇತ್ತೀಚಿಗೆ ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿಗಳು ಮಂತ್ರ ಪಠಣದ ನಡುವೆ ಧಾರ್ಮಿಕ ಸಮಾರಂಭದಲ್ಲಿ ASI ಯಿಂದ ಈ ವಿಗ್ರಹವನ್ನು ಸ್ವೀಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.