ಕರೀಂಗಂಜ್: ಅಸ್ಸಾಂನ ಕರೀಂಗಂಜ್ ಪೊಲೀಸರು ಶನಿವಾರ ಕರೀಂಗಂಜ್ ಜಿಲ್ಲೆಯ ಬಜಾರಿಚೆರಾ ಪೊಲೀಸ್ ವಾಚ್ಪೋಸ್ಟ್ನ ಅಸ್ಸಾಂ-ತ್ರಿಪುರ ಗಡಿಯ ಚುರೈಬರಿ ಪ್ರದೇಶದಲ್ಲಿ 4 ಮಹಿಳೆಯರು ಸೇರಿದಂತೆ 10 ಬಾಂಗ್ಲಾದೇಶ ಪ್ರಜೆಗಳನ್ನು ಬಂಧಿಸಿದ್ದಾರೆ.
ಈ ಘಟನೆ ಕರೀಂಗಂಜ್ ಜಿಲ್ಲೆಯ ಸ್ಥಳೀಯ ಜನರಲ್ಲಿ ಸಂಚಲನ ಮೂಡಿಸಿದೆ. ಇವರೆಲ್ಲರೂ ತ್ರಿಪುರಾದ ಧರ್ಮನಗರದಿಂದ ಬರುತ್ತಿದ್ದರು ಎನ್ನಲಾಗಿದೆ. ಮೂರು ಬೇರೆ ಬೇರೆ ಸಂದರ್ಭಗಳಲ್ಲಿ ವಾಹನಗಳ ತಪಾಸಣೆಯ ಸಮಯದಲ್ಲಿ ಅವರನ್ನು ಬಂಧಿಸಲಾಗಿದೆ. ಇವರೊಂದಿಗೆ ಭಾರತೀಯ ಲಿಂಕ್ಮ್ಯಾನ್ನನ್ನು ಕೂಡ ಬಂಧಿಸಲಾಗಿದೆ. ಬಂಧಿತ ಅಕ್ರಮ ವಲಸಿಗರು ಬಾದರ್ಪುರ ರೈಲು ನಿಲ್ದಾಣದಿಂದ ದಕ್ಷಿಣ ಭಾರತದತ್ತ ತೆರಳುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅವರು ದಕ್ಷಿಣ ಭಾರತದ ನಗರಗಳ ವಿವಿಧ ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುವ ಸಲುವಾಗಿ ಬರುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಲಿಂಕ್ಮ್ಯಾನ್ ಮೂಲಕ ತ್ರಿಪುರಾ ಗಡಿಯ ಮೂಲಕ ಅಕ್ರಮವಾಗಿ ಭಾರತವನ್ನು ಇವರು ಪ್ರವೇಶಿಸಿದ್ದಾರೆ.
ಕರೀಂಗಂಜ್ನ ಪೊಲೀಸರು ಮಾಹಿತಿ ನೀಡಿ, ಭಾರತ-ಬಾಂಗ್ಲಾದೇಶದ ಗಡಿಯನ್ನು ಸುರಕ್ಷಿತವಾಗಿ ದಾಟಲು ಮತ್ತು ದಕ್ಷಿಣ ಭಾರತದಲ್ಲಿ ತಮ್ಮ ನಿಗದಿತ ಸ್ಥಳಗಳಿಗೆ ತಲುಪಲು ಪ್ರತಿಯೊಬ್ಬರೂ ತಮ್ಮ ಭಾರತೀಯ ಹ್ಯಾಂಡ್ಲರ್ಗಳಿಗೆ 35 ಸಾವಿರ ರೂಪಾಯಿ ಪಾವತಿಸಿದ್ದಾರೆ ಎಂದು ಬಂಧಿತ ಬಾಂಗ್ಲಾದೇಶಿ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಬಂಧಿತ ಬಾಂಗ್ಲಾದೇಶಿಗಳು ಕೆಲಸಕ್ಕಾಗಿ ಚೆನ್ನೈಗೆ ತೆರಳುತ್ತಿದ್ದಾರೆ ಎಂದು ಬಜಾರಿಚೆರಾ ಪೊಲೀಸ್ ವಾಚ್ಪೋಸ್ಟ್ನ ಉಸ್ತುವಾರಿ ಮೊನೊರಂಜನ್ ಸಿನ್ಹಾ ತಿಳಿಸಿದ್ದಾರೆ. ಶೋಧ ಸಮಯದಲ್ಲಿ ಅವರು ಯಾವುದೇ ಸರಿಯಾದ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಸಹಾಯ ಮಾಡಿದ್ದಕ್ಕಾಗಿ ರತಾಬರಿ ಪ್ರದೇಶದ ಲಿಂಕ್ಮ್ಯಾನ್ ಬಿದನ್ ಚಂದ್ರ ದಾಸ್ನನ್ನು ಸಹ ಬಂಧಿಸಲಾಗಿದೆ.
ಬಂಧಿತರು ಬಾಂಗ್ಲಾದೇಶದ ರಾಜಶಾಹಿ ಮತ್ತು ಖುಲ್ನಾ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ವಾಹನಗಳ ಚಾಲಕರನ್ನೂ ವಿಚಾರಣೆಗೆ ಕರೆದೊಯ್ಯಲಾಗಿದೆ. ಬಂಧಿತ ಬಾಂಗ್ಲಾ ಪ್ರಜೆಗಳಾದ ಸೊಹೈಲ್ ಅಹ್ಮದ್ 23, ಅಬ್ದುಲ್ ಗಫೂರ್ 29, ನಜ್ಮಾ ಬೇಗಂ 25, ಸೋಫಿರಾ ಅಖ್ತರ್ 23, ಅಲಿಯಾ ಬೇಗಂ 45, ಫಾತಿಮಾ ಅಖ್ತಾ 21, ರಾಜೇಶ್ ಶೇಖ್ 29, ಅಸಾಬುಲ್ ಶೇಖ್ 29, ಸನಾವುಲ್ಲಾ 28, ಕೌಸರ್ ಹುಸೇನ್ 20 ಎಂದು ಗುರುತಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.