ಶ್ರೀನಗರ: ಭಯೋತ್ಪಾದಕರಿಂದ ಹತರಾದ ಕಾಶ್ಮೀರಿ ಪಂಡಿತ ಬಿಂದ್ರೂ ಮೆಡಿಕೇಟ್ ಮಾಲೀಕ ಎಂಎಲ್ ಬಿಂದ್ರೂ ಅವರ ಹೆಸರನ್ನು ಶ್ರೀನಗರದ ರಸ್ತೆಗೆ ಇಡಲಾಗುತ್ತಿದೆ.
ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ (SMC) ಮೇಯರ್ ಜುವಾನಿಡ್ ಮಟ್ಟೂ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಂದ್ರೂ ಅವರ ಹೆಸರಿನ ರಸ್ತೆಯು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳಿಗೆ ಗೌರವವಾಗಿದೆ ಎಂದು ಹೇಳಿದರು.
“ಹಫ್ತ್ ಚಿನಾರ್ ಚೌಕ್ ನಿಂದ ಜಹಾಂಗೀರ್ ಚೌಕ್ (ಬಿಂದ್ರೂ ಮೆಡಿಕೇಟ್ ಇರುವ) ರಸ್ತೆಗೆ ಶಹೀದ್ ಮಖನ್ ಲಾಲ್ ಬಿಂದ್ರೂ ರಸ್ತೆ ಎಂದು ಹೆಸರಿಡಲಾಗಿದೆ.
ಎಸ್ಎಂಸಿ ಜನರಲ್ ಕೌನ್ಸಿಲ್ನಲ್ಲಿ ಈ ಕುರಿತ ನಿರ್ಣಯವನ್ನು ಔಪಚಾರಿಕವಾಗಿ ಪ್ರಸ್ತಾಪಿಸಲಾಗುವುದು ಎಂದು ಶ್ರೀನಗರ ಮುನ್ಸಿಪಲ್ ಕಾರ್ಪೊರೇಶನ್ನ ಮೇಯರ್ ಜುನೈದ್ ಮಟ್ಟೂ ಹೇಳಿದ್ದಾರೆ.
ಮಖನ್ ಲಾಲ್ ಬಿಂದ್ರೂ ಅವರು ಶ್ರೀನಗರ ನಗರದ ಇಕ್ಬಾಲ್ ಪಾರ್ಕ್ ಬಳಿಯ ‘ಬಿಂದ್ರೂ ಮಡಿಕೇಟ್’ ಅಂಗಡಿಯಿಂದ ಔಷಧಿಗಳನ್ನು ಖರೀದಿಸುತ್ತಿದ್ದ ಎಲ್ಲರಿಗೂ ಗೌರವಾನ್ವಿತ ಮತ್ತು ವಿಶ್ವಾಸಾರ್ಹ ವ್ಯಕ್ತಿಯಾಗಿದ್ದರು.
1990 ರ ದಶಕದ ಆರಂಭದಲ್ಲಿ ಅವರ ಸಂಬಂಧಿಕರು ಮತ್ತು ಸ್ನೇಹಿತರನ್ನು ಒಳಗೊಂಡಂತೆ ಬಿಂದ್ರೂ ಸಮುದಾಯದ ಬಹುಪಾಲು ಜನರು ಕಣಿವೆಯಿಂದ ವಲಸೆ ಹೋದಾಗ, ಬಿಂದ್ರೂ ಅವರು ಮಾತ್ರ ಅಲ್ಲೇ ನೆಲೆ ನಿಂತರು ಮತ್ತು ಶ್ರೀನಗರದ ಹರಿ ಸಿಂಗ್ ಹೈ ಸ್ಟ್ರೀಟ್ ಮೇಲಿನ ತುದಿಯಲ್ಲಿರುವ ತನ್ನ ಅಂಗಡಿಯಲ್ಲಿ ಔಷಧಿಗಳನ್ನು ಮಾರಾಟ ಮಾಡುವುದನ್ನು ಮುಂದುವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.