ನವದೆಹಲಿ: ನವರಾತ್ರಿಯ ಸಂದರ್ಭದಲ್ಲಿ ದೇಶದಾದ್ಯಂತ ನಡೆಯುವ ದುರ್ಗಾ ಪೂಜೆ ಮತ್ತು ಆರತಿ ಸೇರಿದಂತೆ ಭಕ್ತಿ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲು ಪ್ರಸಾರ ಭಾರತಿ ಮುಂದಾಗಿದೆ.
ದೂರದರ್ಶನದಲ್ಲಿ 9 ದಿನಗಳ ಕಾಲ ದುರ್ಗಾಪೂಜೆ ಮತ್ತು ಆರತಿಗಳು ನೇರ ಪ್ರಸಾರವಾಗಲಿದೆ. ಕೋಲ್ಕತ್ತಾದ ಪ್ರಸಿದ್ಧ ಮಹಾಲಯ ಮತ್ತು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ನವರಾತ್ರಿ ಬ್ರಹ್ಮೋತ್ಸವ ಕೂಡ ಇದರಲ್ಲಿ ಸೇರಿದೆ.
ಛತ್ತರ್ಪುರ ಮಂದಿರದ ಆರತಿ ಮತ್ತು ಕೋಲ್ಕತ್ತಾದ ಜಂಡೇವಲನ್ ಮಂದಿರದ ದುರ್ಗಾಪೂಜೆ ಕೂಡ ನೇರ ಪ್ರಸಾರವಾಗಲಿದೆ.
ದೂರದರ್ಶನದಲ್ಲಿ ಆಯೋಧ್ಯೆಯ ‘ಆಯೋಧ್ಯಾ ಕಿ ರಾಮಲೀಲಾ’ ಕೂಡ ಪ್ರಸಾರವಾಗಲಿದೆ.
“ಅಕ್ಟೋಬರ್ 6 ರಿಂದ 15 ರವರೆಗೆ ನಿತ್ಯ ಎರಡು ಸಂಚಿಕೆಯಲ್ಲಿ ರಾಮಚರಿತ ಮಾನಸವನ್ನು ಕೂಡ ಡಿಡಿ ನ್ಯಾಷನಲ್ ಪ್ರಸಾರ ಮಾಡಲಿದೆ” ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಆಲ್ ಇಂಡಿಯಾ ರೇಡಿಯೋ ದ ದೇಶವ್ಯಾಪಿ ನೆಟ್ವರ್ಕ್ನಲ್ಲೂ ನವರಾತ್ರಿಯ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿದೆ. ಇವುಗಳ ಆಡಿಯೋ ವಿಶೂವಲ್ ಕಂಟೆಂಟ್ ಕೂಡ ಪ್ರಸಾರ ಭಾರತೀಯ ನ್ಯೂಸ್ ಆನ್ ಏರ್ ಅಪ್ಲಿಕೇಶನ್ನಲ್ಲಿ ಲಭ್ಯವಾಗಲಿದೆ. ಯೂಟ್ಯೂಬ್ ಚಾನೆಲ್ಗಳಲ್ಲಿ ಕೂಡ ಇದು ಲೈವ್ ಸ್ಟ್ರೀಮ್ ಆಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.