ನವದೆಹಲಿ: ಇಂಡಿಯಾ ಸ್ಮಾರ್ಟ್ ಸಿಟಿ ಅವಾರ್ಡ್ಸ್ (ಐಎಸ್ಎಸಿ) 2020 ಅನ್ನು ಕೇಂದ್ರವು ಪ್ರಕಟಿಸಿದ್ದು, ಇದರಲ್ಲಿ ಇಂದೋರ್ ಮತ್ತು ಸೂರತ್ ಜಂಟಿ ವಿಜೇತ ನಗರಗಳಾಗಿ ಹೊರಹೊಮ್ಮಿವೆ. ಚಂಡೀಗಢ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, ರಾಜ್ಯಗಳ ಪ್ರಶಸ್ತಿ ವಿಭಾಗದಲ್ಲಿ ಉತ್ತರ ಪ್ರದೇಶವು ಉನ್ನತ ಸ್ಥಾನವನ್ನು ಗಳಿಸಿದರೆ, ಮಧ್ಯಪ್ರದೇಶ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ.
ಕೇಂದ್ರ ಸರ್ಕಾರದ ಮೂರು ನಗರಾಭಿವೃದ್ಧಿ ಉಪಕ್ರಮಗಳಾದ ಸ್ಮಾರ್ಟ್ ಸಿಟಿ ಮಿಷನ್ (ಎಸ್ಸಿಎಂ), ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಮತ್ತು ಅಟಲ್ ಮಿಷನ್ ಫಾರ್ ಅರ್ಬನ್ ರಿಜುವನೇಷನ್ & ಅರ್ಬನ್ ಟ್ರಾನ್ಸ್ಫರ್ಮೇಷನ್ (ಎಎಂಆರ್ಯುಟಿ) ನ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಈ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.
ಸಾಮಾಜಿಕ ಅಂಶಗಳು, ಆಡಳಿತ, ಸಂಸ್ಕೃತಿ, ನಗರ ಪರಿಸರ, ನೈರ್ಮಲ್ಯ, ಆರ್ಥಿಕತೆ, ಪರಿಸರ ನಿರ್ಮಾಣ, ನೀರು ಮತ್ತು ನಗರ ಸಾರಿಗೆ ಮುಂತಾದವುಗಳನ್ನು ಆಧರಿಸಿ ಪ್ರಶಸ್ತಿಗಳನ್ನು ನೀಡಲಾಗಿದೆ.
ವರದಿಗಳ ಪ್ರಕಾರ, ಆಗ್ರಾ, ವಾರಣಾಸಿ, ಲಕ್ನೋ, ಪ್ರಯಾಗರಾಜ್ ನಂತಹ ಕೆಲವು ನಗರಗಳು ಉತ್ತಮ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ತೋರಿಸಿದೆ.
ಸಚಿವಾಲಯದ ಪ್ರಕಾರ, ಇಂದೋರ್ “ಇನ್ನೋವೇಶನ್ ಐಡಿಯಾ ಅವಾರ್ಡ್” ಗೆದ್ದಿದೆ. ‘ಸ್ಮಾರ್ಟ್ ಸಿಟೀಸ್ ಲೀಡರ್ಶಿಪ್ ಅವಾರ್ಡ್’ ಅಹಮದಾಬಾದ್ಗೆ ಹೋಗಿದೆ, ವಾರಣಾಸಿ ಮತ್ತು ರಾಂಚಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ. ಇಂದೋರ್, ಅಹಮದಾಬಾದ್, ಪುಣೆ, ವಿಜಯವಾಡ, ರಾಜ್ಕೋಟ್, ವಿಶಾಖಪಟ್ಟಣಂ, ಪಿಂಪ್ರಿ-ಚಿಂಚ್ವಾಡ್ ಮತ್ತು ವಡೋದರಾ, ಸೂರತ್, ಅತ್ಯುತ್ತಮ ಪ್ರದರ್ಶನ ನೀಡಿದ ಅಗ್ರ ಒಂಬತ್ತು ನಗರಗಳಾಗಿದ್ದು, ಪ್ರತಿಯೊಂದೂ ನಾಲ್ಕು ಸ್ಟಾರ್ ರೇಟಿಂಗ್ ಪಡೆದಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.