ನವದೆಹಲಿ: ಅಯೋಧ್ಯೆಗಾಗಿನ ವಿಶನ್ ಡಾಕ್ಯುಮೆಂಟ್ (ದೂರದೃಷ್ಟಿಯ ದಾಖಲೆ) ಅನ್ನು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಕರಡು ಡಾಕ್ಯುಮೆಂಟ್ಗಾಗಿ ನೇಮಕ ಮಾಡಿರುವ ಸಲಹೆಗಾರರು ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಿಶನ್ ಡಾಕ್ಯುಮೆಂಟ್ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
LEA ಅಸೋಸಿಯೇಟ್ಸ್ ಸೌತ್ ಏಷ್ಯಾ ಪ್ರೈವೇಟ್ ಲಿಮಿಟೆಡ್ ಸುಮಾರು 5000 ನಾಗರಿಕರು ಮತ್ತು 500 ಪ್ರವಾಸಿಗರ ಸಹಾಯದಿಂದ ಈ ದೂರ ದಾಖಲೆಯನ್ನು ಸಿದ್ಧಪಡಿಸಿದೆ. ರಾಮ ಮಂದಿರ ನಿರ್ಮಾಣವಾಗುತ್ತಿದ್ದಂತೆ ಯುಪಿ ನಗರದಲ್ಲಿ ನಾಲ್ಕು ಲಕ್ಷ ಉದ್ಯೋಗಗಳು ಮತ್ತು ಎಂಟು ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಈ ದಾಖಲೆ ಹೊಂದಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) 2588 ಕೋಟಿ ವೆಚ್ಚದಲ್ಲಿ ಅಯೋಧ್ಯೆಯಲ್ಲಿ 65 ಕಿ.ಮೀ ಉದ್ದದ ರಿಂಗ್ ರೋಡ್ ಅನ್ನು ನಿರ್ಮಿಸುತ್ತಿದೆ.
ನಗರದಲ್ಲಿ ನಾಲ್ಕು ಪ್ರಮುಖ ಭಗವಾನ್ ರಾಮ ದ್ವಾರಗಳನ್ನು ನಿರ್ಮಿಸಲು ದೂರದೃಷ್ಟಿ ದಾಖಲೆ ಪ್ರಸ್ತಾಪಿಸಿದೆ, ಇದು ರಾಮ ಮಂದಿರ ವಿನ್ಯಾಸದಿಂದ ಪ್ರೇರಿತವಾಗಲಿದೆ. ರಾಮಾಯಣ ಆಧ್ಯಾತ್ಮಿಕ ಅರಣ್ಯವನ್ನು 2300 ಎಕರೆ ಪ್ರದೇಶದಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ, ರಾಮಾಯಣ ಆಧ್ಯಾತ್ಮಿಕ ಥೀಮ್ ಪಾರ್ಕ್ ಅನ್ನು ಸಹ ನಿರ್ಮಿಸಲಾಗುತ್ತಿದೆ
ಗ್ರೀನ್ಫೀಲ್ಡ್ ಟೌನ್ಶಿಪ್ ಅನ್ನು ಅಭಿವೃದ್ಧಿಪಡಿಸುವುದರಿಂದ ಹಿಡಿದು ಅಂತರರಾಷ್ಟ್ರೀಯ ಮಾನದಂಡಗಳ ಹೊಸ ವಿಮಾನ ನಿಲ್ದಾಣದವರೆಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ನಗರವನ್ನು ಧಾರ್ಮಿಕ ಮತ್ತು ಪ್ರವಾಸೋದ್ಯಮ ಆಕರ್ಷಣೆಯನ್ನಾಗಿ ಮಾಡುವತ್ತ ದೃಷ್ಟಿ ನೆಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.