ನವದೆಹಲಿ: ದೆಹಲಿ ಸರ್ಕಾರವು ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕಕ್ಕೆ ಬೇಡಿಕೆಯನ್ನು ಇಟ್ಟಿತ್ತು ಎಂದು ಕಳೆದ ತಿಂಗಳು ಕೊವಿಡ್ -19 ರ ಮಾರಕ ಎರಡನೇ ಅಲೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಸ್ಥಾಪಿಸಿದ ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿಯು ತಿಳಿಸಿದೆ.
ಏಪ್ರಿಲ್-ಮೇ ತಿಂಗಳುಗಳಲ್ಲಿ, ದೆಹಲಿಯ ಅನೇಕ ಆಸ್ಪತ್ರೆಗಳು ಆಮ್ಲಜನಕದ ಪೂರೈಕೆಯ ಕೊರತೆ ಅನುಭವಿಸಿದ್ದವು, ಈ ಕಾರಣದಿಂದಾಗಿ ಕೆಲವು ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದವು. ಇದು ಕೇಜ್ರಿವಾಲ್ ಸರ್ಕಾರ ಮತ್ತು ಕೇಂದ್ರದ ನಡುವೆ ಮಾತಿನ ಯುದ್ಧಕ್ಕೆ ನಾಂದಿ ಹಾಡಿತು. ದೆಹಲಿ ಸರ್ಕಾರ ಕೇಂದ್ರದ ಮೇಲಿನ ಆಮ್ಲಜನಕ ಪೂರೈಕೆಗಾಗಿ ಭಾರೀ ಒತ್ತಡವನ್ನು ಹಾಕಿತ್ತು.
ದೆಹಲಿ ಹೈಕೋರ್ಟ್ನ ಮಧ್ಯಪ್ರವೇಶದಿಂದ ಕೇಂದ್ರವು ಆ ತಿಂಗಳುಗಳಲ್ಲಿ ದೆಹಲಿಯ ಆಮ್ಲಜನಕ ಹಂಚಿಕೆಯನ್ನು ಪರಿಷ್ಕರಿಸಿತು ಮತ್ತು ಇತರ ರಾಜ್ಯಗಳಿಗೆ ಕಡಿಮೆ ಮಾಡಿ ದೆಹಲಿಗೆ ಹೆಚ್ಚಿನ ಜೀವ ಉಳಿಸುವ ಅನಿಲವನ್ನು ಪೂರೈಸಿತು.
ಆದರೀಗ ಲೆಕ್ಕಪರಿಶೋಧನಾ ವರದಿಯ ಪ್ರಕಾರ, ದೆಹಲಿಗೆ ಆ ಸಮಯದಲ್ಲಿ ಸುಮಾರು 300 ಮೆಟ್ರಿಕ್ ಟನ್ ಆಮ್ಲಜನಕ ಬೇಕಾಗಿತ್ತು, ಆದರೆ ದೆಹಲಿ ಸರ್ಕಾರವು 1200 ಮೆಟ್ರಿಕ್ ಟನ್ಗಳಿಗೆ ಬೇಡಿಕೆಯನ್ನು ಇಟ್ಟಿತ್ತು.
ದೆಹಲಿಯ ಅತಿಯಾದ ಬೇಡಿಕೆಯಿಂದಾಗಿ, ಇತರ 12 ರಾಜ್ಯಗಳು ಜೀವ ಉಳಿಸುವ ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸಬೇಕಾಯಿತು ಎಂದು ಆಮ್ಲಜನಕ ಲೆಕ್ಕಪರಿಶೋಧನಾ ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.