ರಾಯ್ಪುರ: ತಲೆಯ ಮೇಲೆ ರೂ 1 ಲಕ್ಷ ಬಹುಮಾನವನ್ನು ಹೊತ್ತುಕೊಂಡಿದ್ದ ಒರ್ವ ಸೇರಿದಂತೆ ಮೂವರು ನಕ್ಸಲರು ಸೋಮವಾರ ಛತ್ತೀಸ್ಗಢದ ದಂತೇವಾಡ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಕೆ, ರಸ್ತೆಗಳು ಮತ್ತು ಸೇತುವೆಗಳಿಗೆ ಹಾನಿ ಮಾಡಿದ ಪ್ರಕರಣ ಮತ್ತು 2015 ರಿಂದ ದಂತೇವಾಡಾ ಮತ್ತು ನೆರೆಯ ಸುಕ್ಮಾ ಜಿಲ್ಲೆಗಳಲ್ಲಿ ಮಾವೋವಾದಿ ಪೋಸ್ಟರ್ ಮತ್ತು ಬ್ಯಾನರ್ಗಳನ್ನು ಹಾಕಿಸಿದ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರುಗಳು ಸೋಮವಾರ ದಂತೇವಾಡಾದಲ್ಲಿ ಪೊಲೀಸರ ಮುಂದೆ ತಮ್ಮನ್ನು ತಾವು ಶರಣಾಗಿಸಿಕೊಂಡಿದ್ದಾರೆ, ಪೊಲೀಸರ ಪುನರ್ವಸತಿ ಅಭಿಯಾನ ‘ಲೋನ್ ವರ್ರತು (ಮನೆಗೆ ಮರಳಿ)’ ಯಿಂದ ಪ್ರಭಾವಿತರಾಗಿದ್ದಾರೆ ಮತ್ತು ಟೊಳ್ಳು ಮಾವೋವಾದಿ ಸಿದ್ಧಾಂತದಿಂದ ನಿರಾಶೆಗೊಂಡಿದ್ದಾರೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.
ಮೂವರು ನಕ್ಸಲರಲ್ಲಿ ಒರ್ವ ಕಮಾಂಡರ್ ಆಗಿ ಸಕ್ರಿಯನಾಗಿದ್ದ ಆಯತಾ ಕೊಹ್ರಾಮಿ, ಇವನ ತಲೆಯ ಮೇಲೆ ರೂ 1 ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು, ಇತರ ಇಬ್ಬರು ನಕ್ಸಲ್ ಕಾರ್ಯಕರ್ತರಾದ ಯುಕಾ ಸೊಮ್ಡು (23) ಮತ್ತು ಕಾರ್ತಮ್ ಮಹೇಂದ್ರ (22), ಇವರು ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.