ನವದೆಹಲಿ: ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಮುಂಬೈ ಮತ್ತು ವಾರಣಾಸಿಯಲ್ಲಿ ಭಗವಾನ್ ವೆಂಕಟೇಶ್ವರ ದೇವಾಲಯಗಳನ್ನು ನಿರ್ಮಿಸಲು ನಿರ್ಧರಿಸಿದೆ.
ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಅವರು ಹೊಸ ದೇವಾಲಯಗಳ ಯೋಜನೆಗಳ ಬಗ್ಗೆ ತಿಳಿಸಿದ್ದಾರೆ.
ಈಗಾಗಲೇ, ಟಿಟಿಡಿ ಜಮ್ಮುವಿನ ಮಜ್ಹಿನಿ ಗ್ರಾಮ ಪ್ರದೇಶದಲ್ಲಿ ದೇವಾಲಯಕ್ಕೆ ಅಡಿಪಾಯ ಹಾಕಿದೆ.
ಟಿಟಿಡಿ ಮಂಡಳಿಯು ಕಳೆದ ಎರಡು ವರ್ಷಗಳಲ್ಲಿ ಸಮರ್ಸಾಟ ಫೌಂಡೇಶನ್ ಮತ್ತು ದತ್ತಿ ವಿಭಾಗದ ಸಹಾಯದಿಂದ 500 ದೇವಾಲಯಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ, ಆದರೆ ಸಾಂಕ್ರಾಮಿಕ ರೋಗದಿಂದಾಗಿ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಳಂಬವಾಗುತ್ತಿದೆ.
ಆದರೂ, ಮುಂದಿನ ಒಂದು ವರ್ಷದಲ್ಲಿ ದಲಿತ ಪ್ರದೇಶಗಳು, ಏಜೆನ್ಸಿ ಪ್ರದೇಶಗಳು ಮತ್ತು ಮೀನುಗಾರರ ಪ್ರದೆಶಗಳಲ್ಲಿ ದೇಗುಲ ನಿರ್ಮಾಣ ಪೂರ್ಣಗೊಳಿಸಲು ಟಿಟಿಡಿ ನಿರ್ಧರಿಸಿದೆ.
ಟಿಟಿಡಿಯು ಕನ್ನಡ ಮತ್ತು ಹಿಂದಿ ಎಸ್ವಿಬಿಸಿ ಆಧ್ಯಾತ್ಮಿಕ ಚಾನೆಲ್ಗಳನ್ನು 2 – 3 ತಿಂಗಳಲ್ಲಿ ಪ್ರಾರಂಭಿಸುವ ಗುರಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.