ಶ್ರೀರಾಮ ಜನ್ಮಭೂಮಿ ಮಂದಿರದ ಪ್ರದಕ್ಷಿಣಾ ಮಾರ್ಗವನ್ನು ವಾಸ್ತು ಪ್ರಕಾರ ಸರಿಪಡಿಸಲು, ಪರಿಸರದ ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಯಾತ್ರಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಖಾಲಿ ಮೈದಾನ ಕಲ್ಪಿಸಲು ಹಾಗೂ ಮಂದಿರದ ಸುರಕ್ಷತೆಗಾಗಿ ಪರಿಸರದ ಸುತ್ತಮುತ್ತಲಿನ ಮಂದಿರಗಳು ಹಾಗೂ ಮನೆಗಳನ್ನು ಖರೀದಿಸುವುದು ನಮ್ಮ ಅನಿವಾರ್ಯ ಅವಶ್ಯಕತೆಯಾಗಿದೆ. ಈ ರೀತಿ ಖರೀದಿಸಿದ ಮಂದಿರಗಳಿಗೆ ಬೇರೆಡೆ ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಅಯೋಧ್ಯೆಯಲ್ಲಿ ಭೂಮಿ ಖರೀದಿಸಲಾಗುತ್ತಿದೆ.
ಇಂತಹ ಖರೀದಿ ವ್ಯವಹಾರವು ಪರಸ್ಪರ ಮಾತುಕತೆ ಹಾಗೂ ಪೂರ್ಣ ಸಹಮತಿಯ ಆಧಾರದ ಮೇಲೆ ಮಾಡಲಾಗುತ್ತಿದೆ. ಪರಸ್ಪರ ಸಹಮತಿಯ ನಂತರ ಸಹಮತಿ ಪತ್ರದ ಮೇಲೆ ಸಹಿ ಮಾಡಲಾಗುತ್ತದೆ.
ಸರ್ಕಾರದ ಶುಲ್ಕ ಹಾಗೂ ಸ್ಟಾಂಪ್ ಖರೀದಿ ಎಲ್ಲವೂ ಆನ್ಲೈನ್ ಮೂಲಕ ನಡೆಯುತ್ತಿದೆ. ಸಹಮತಿ ಪತ್ರದಲ್ಲಿರುವಂತೆ ಭೂಮಿಯ ಬೆಲೆಯನ್ನು ಮಾರಾಟಗಾರರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ.
2019 ನವೆಂಬರ್ 9 ರಂದು ಶ್ರೀರಾಮ ಜನ್ಮಭೂಮಿಯ ಕುರಿತಾದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಭೂಮಿ ಖರೀದಿಸಲು ದೇಶದ ಮೂಲೆಮೂಲೆಗಳಿಂದ ಅಸಂಖ್ಯ ಜನರು ಆಗಮಿಸುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರವೂ ಅಯೋಧ್ಯೆಯ ವಿಕಾಸಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸುತ್ತಿದೆ. ಇದರ ಪರಿಣಾಮವಾಗಿ ಇದ್ದಕ್ಕಿದ್ದಂತೆ ಭೂಮಿಯ ಬೆಲೆ ಗಗನಕ್ಕೇರಿದೆ. ಪತ್ರಿಕೆಯಲ್ಲಿ ಚರ್ಚೆ ನಡೆಯುತ್ತಿರುವ ಭೂ ಪ್ರದೇಶವು ರೇಲ್ವೆ ನಿಲ್ದಾಣದ ಸಮೀಪದ ಬಹುಮೂಲ್ಯ ಸ್ಥಾನವಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರವು ಇಲ್ಲಿಯವರೆಗೆ ಎಲ್ಲ ಭೂಮಿಗಳನ್ನು ಹೊರಗಡೆ ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಿದೆ.
ಉಲ್ಲೇಖಿಸಿರುವ ಭೂಮಿಯನ್ನು ಖರೀದಿಸಲು ಮಾರಾಟಗಾರರು ಬಹಳ ವರ್ಷಗಳ ಮೊದಲು ಒಪ್ಪಂದ ಪತ್ರ (2011 ರಲ್ಲಿ ರೂ. 2 ಕೋಟಿಗೆ) ನೋಂದಾವಣೆ ಮಾಡಿಕೊಂಡಿದ್ದರೂ ಸಹ ಅನ್ಯಾನ್ಯ ಕಾರಣಗಳಿಂದ ಖರೀದಿ ಪತ್ರ ಮಾಡಿಕೊಂಡಿರಲಿಲ್ಲ. ಇದೇ ಮಾರ್ಚ್ 18 ರಂದು ಅದೇ ಬೆಲೆಗೆ ಖರೀದಿ ಪತ್ರ ಮಾಡಿಕೊಂಡ ನಂತರ ನಮ್ಮ ಸಂಸ್ಥೆಯ ಜೊತೆಗೆ ಒಪ್ಪಂದ ಪತ್ರ ಮಾಡಿಕೊಡಲಾಗಿದೆ.
ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಈ ವಿಷಯವನ್ನು ಮಾಧ್ಯಮಗಳ ಮೂಲಕ ಭ್ರಾಮಕ ಪ್ರಚಾರ ನೀಡಿ ಸಮಾಜವನ್ನು ಉದ್ವಿಗ್ನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಶ್ರೀರಾಮ ಅವರಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಧಾನ ಕಾರ್ಯದರ್ಶಿ ಚಂಪತರಾಯ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.