ನವದೆಹಲಿ: ಕಳೆದ ನೂರು ವರ್ಷಗಳಲ್ಲಿಯೇ ದೇಶ ಕಂಡ ದೊಡ್ಡ ಸೋಂಕು ಕೊರೋನಾ ಆಗಿದ್ದು, ಈ ಪರಿಸ್ಥಿತಿ ಜಯಿಸಲು ಇಡೀ ದೇಶವೇ ಒಂದಾಗಿ ಹೋರಾಟ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.
ಕೊರೋನಾ ಹೊಡೆತದ ಜೊತೆಗೆ ದೇಶದ ಕೆಲ ರಾಜ್ಯಗಳಲ್ಲಿ ತೌಕ್ತೆ, ಯಾಸ್ ಮೊದಲಾದ ಚಂಡಮಾರುತಗಳಿಂದಲೂ ಸಮಸ್ಯೆ ಉಂಟಾಗಿದ್ದು, ಇವುಗಳನ್ನೂ ಎದುರಿಸಬೇಕಾಗಿದೆ ಎಂದು ಅವರು ಹೇಳಿದರು. ಸವಾಲುಗಳು ಎಷ್ಟೇ ದೊಡ್ಡದಿರಲಿ, ಅವುಗಳ ವಿರುದ್ಧ ಹೋರಾಡುವ ನಮ್ಮ ಸಾಮೂಹಿಕ ಶಕ್ತಿ ಅದಕ್ಕಿಂತ ಬಲಶಾಲಿಯಾಗಿರುತ್ತದೆ. ಸದ್ಯ ಕೊರೋನಾ ಪರಿಸ್ಥಿತಿ ನಿಭಾಯಿಸಲು ವೈದ್ಯರು, ದಾದಿಯರು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ದೇಶದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ಉಂಟಾಗಿದೆ. ಈ ಸಂದರ್ಭದಲ್ಲಿ ವಿದೇಶಗಳೂ ಸಹ ಭಾರತಕ್ಕೆ ಆಕ್ಸಿಜನ್ ಒದಗಿಸುತ್ತಿವೆ. ಇಂತಹ ಸಂದರ್ಭದಲ್ಲಿ ಮಹಿಳೆಯರೇ ಆಕ್ಸಿಜನ್ ರೈಲನ್ನು ಚಲಾಯಿಸಿರುವುದು ಶ್ಲಾಘನೀಯ. ಇದು ದೇಶದ ಹೆಮ್ಮೆ ಎಂದು ಲೋಕೋಪೈಲಟ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆಕ್ಸಿಜನ್ ರೈಲು ಚಲಾಯಿಸುವ ಶಿರಿಷಾ ಗಜನಿ ಅವರ ಜೊತೆಗೂ ಪ್ರಧಾನಿ ಮೋದಿ ಮಾತನಾಡಿದರು. ಅವರ ಕಾರ್ಯಕ್ಕೆ ಮೋದಿ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕೊರೋನಾ ಸೋಂಕಿನಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದೇಶವಾಸಿಗಳಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿದರು. ಅವರಿಗೆ ಧೈರ್ಯ ಹೇಳಿದರು.
ಕೊರೋನಾ ನಿರ್ವಹಣೆಗೆ ಮುಂಚೂಣಿ ಕಾರ್ಯಕರ್ತರು ಪಡುತ್ತಿರುವ ಶ್ರಮವನ್ನು ಶ್ಲಾಘಿಸಿದರು. ಆರಂಭದಲ್ಲಿ ದೇಶದಲ್ಲಿ ಕೊರೋನಾ ಸೋಂಕಿತರ ಪರೀಕ್ಷೆ ನಡೆಸುವ ಲ್ಯಾಬ್, ತಂತ್ರಜ್ಞಾನ ವ್ಯವಸ್ಥೆ ಕಡಿಮೆ ಇತ್ತು. ಆದರೆ ಇಂದು 2500 ಕ್ಕೂ ಅಧಿಕ ಲ್ಯಾಬ್ಗಳು ಕಾರ್ಯನಿರ್ವಹಿಸುತ್ತಿದ್ದು, ದಿನದಲ್ಲಿ 20 ಲಕ್ಷಕ್ಕೂ ಅಧಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮೋದಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.