ನವದೆಹಲಿ: ಸಿಂಗಾಪುರದ ಕೋವಿಡ್ ರೂಪಾಂತರದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಡಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಸಿಂಗಾಪುರ ವಿದೇಶಾಂಗ ಸಚಿವಾಲಯ ಬುಧವಾರ ಬಲವಾದ ಪ್ರತಿಕ್ರಿಯೆ ನೀಡಿದ್ದು, “ಪ್ರಮುಖ ರಾಜಕೀಯ ವ್ಯಕ್ತಿಯೊಬ್ಬರು ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಸತ್ಯವನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂಬುದು ನಿರಾಶೆಯಾಗಿದೆ” ಎಂದಿದೆ.
“ಸಿಂಗಾಪುರ ರೂಪಾಂತರ ಮಕ್ಕಳಿಗೆ ಅಪಾಯಕಾರಿಯಾಗಿದ್ದು, ಭಾರತದಲ್ಲಿ ಮೂರನೇ ಅಲೆ ಸೃಷ್ಟಿಸುವ ಸಾಧ್ಯತೆ ಇದೆ” ಎಂದು ಕೇಜ್ರಿವಾಲ್ ಟ್ವಿಟರ್, ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ. ಅವರು ನೀಡಿರುವ ಈ ಹೇಳಿಕೆ ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಕಪ್ಪುಚುಕ್ಕೆಯಾಗಿದ್ದು, ಎಲ್ಲೆಡೆಯಿಂದ ಅವರಿಗೆ ಛಿಮಾರಿ ಬೀಳುತ್ತಿದೆ.
ಕೇಜ್ರಿವಾಲ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್, “ಸಿಂಗಾಪುರ ಮತ್ತು ಭಾರತವು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ದೃಢವಾದ ಪಾಲುದಾರರಾಗಿವೆ. ಆದರೂ, ಉತ್ತಮವಾಗಿ ತಿಳಿದುಕೊಳ್ಳಬೇಕಾದವರ ಬೇಜವಾಬ್ದಾರಿ ಕಾಮೆಂಟ್ಗಳು ದೀರ್ಘಕಾಲದ ಸಹಭಾಗಿತ್ವವನ್ನು ಹಾನಿಗೊಳಿಸುತ್ತಿವೆ. ದೆಹಲಿ ಸಿಎಂ ಎಂದೂ ಭಾರತದ ಪರವಾಗಿ ಮಾತನಾಡುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ” ಎಂದಿದ್ದಾರೆ.
“ಸಿಂಗಾಪುರ್ ರೂಪಾಂತರ” ಕುರಿತು ದೆಹಲಿ ಸಿಎಂ ಅವರ ಟ್ವೀಟ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿರುವ ಸಿಂಗಾಪುರ ಸರ್ಕಾ, ಇಂದು ಭಾರತದ ಹೈಕಮಿಷನರ್ಗೆ ಅವರಿಗೆ ಸಮನ್ಸ್ ನೀಡಿ ತನ್ನ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
“ದೆಹಲಿ ಸಿಎಂ ಅವರು ಕೋವಿಡ್ ರೂಪಾಂತರ ಮತ್ತು ನಾಗರಿಕ ವಿಮಾನಯಾನ ನಿಯಮʼಗಳ ಬಗ್ಗೆ ಮಾತನಾಡಲು ದಕ್ಷರಲ್ಲ ಎಂದು ನಮ್ಮ ಹೈಕಮಿಷನರ್ ಸಿಂಗಾಪುರಕ್ಕೆ ಸ್ಪಷ್ಟಪಡಿಸಿದ್ದಾರೆ” ಎಂದು ಜೈಶಂಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.