ಚನ್ನೈ: ತಮಿಳುನಾಡಿನ ಪ್ರತಿಷ್ಠಿತ ಮಾಧ್ಯಮಗಳು ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಒಟ್ಟಾಗಿ ದನಿ ಎತ್ತಿವೆ. ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಟಿ.ಎಂ.ಸಿ ಹಿಂಸಾಚಾರ ಖಂಡನೀಯ.
ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಪ್ರಧಾನ ಭೂಮಿಕೆ ವಹಿಸುತ್ತವೆ. ಇಲ್ಲಿ ಸೋಲು ಮತ್ತು ಗೆಲುವು ಸಹಜ, ರಾಜಕೀಯದಲ್ಲಿ ಗೆಲುವು ಪಡೆದವರು ಜವಾಬ್ದಾರಿಯಿಂದ ಸಮನಸ್ಸಿನಿಂದ ಆಡಳಿತ ಚುಕ್ಕಾಣಿ ಹಿಡಿಯಬೇಕು. ಸೋತವರು ಕೂಡಾ ತಮ್ಮ ಪಾಲಿನ ವಿಪಕ್ಷ ಸ್ಥಾನಮಾನಗಳನ್ನು ಪಡೆಯುತ್ತಾರೆ. ಆದರೆ ಬಂಗಾಳದಲ್ಲಿ ಬಹುಮತ ಗಳಿಸಿದ ಮಮತಾ ಬ್ಯಾನರ್ಜಿ ಪಕ್ಷ ಇದರಿಂದ ಹೊರತಾಗಿದೆ. ಚುನಾವಣೆ ಜಯಿಸಿ ಶಾಸಕರಾದ ತ್ರಿಣಮೂಲ ನಾಯಕರು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಕೊಲೆ, ದರೋಡೆ, ದೊಂಬಿ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿದ್ದು ಇವುಗಳನ್ನು ನಿರ್ದಯವಾಗಿ ಖಂಡಿಸುತ್ತೇವೆ ಎಂದು ತಮಿಳು ದೃಶ್ಯ ಮತ್ತು ಪತ್ರಿಕಾ ಮಧ್ಯಮ ಒಕ್ಕೂಟ ಹೇಳಿದೆ. ಜನಸಾಮಾನ್ಯರು ಹಿಂಸಾಕೃತ್ಯದಿಂದ ಭಯಭೀತರಾಗಿದ್ದು ಸಮೀಪದ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ.
ತಮ್ಮ ನಾಡಿನಲ್ಲಿಯೇ ನಿರಾಶ್ರಿತರಾಗಿರುವ ಹಲವು ಮಂದಿ ಬಂಗಾಳಿಗರು ಸಮೀಪದ ಅಸ್ಸಾಂ ರಾಜ್ಯಕ್ಕೆ ಪಲಾಯನ ಮಾಡಿದ್ದಾರೆ. ಇಂತಹ ಪರಿಸ್ಥಿತಿಯು ಭಾರತದ ವಿಭಜನೆಯನ್ನು ನೆನಪಿಸುವಂತಿದೆ ಎಂದು ಒಕ್ಕೂಟದ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ನಾಗರಿಕ ಸಮಾಜವು ಇಂತಹ ಘಟನೆಗಳನ್ನು ಗಟ್ಟಿಯಾಗಿ ವಿರೋಧಿಸಬೇಕು ಮಾತ್ರವಲ್ಲ ಪ್ರಶ್ನಿಸಬೇಕಿದೆ. ಯುವ ಸಮೂಹ ಸಹಿತ ಎಲ್ಲರೂ ಇದನ್ನು ಸಮಾಜಿಕ ಜಾಲತಾಣಗಳಲ್ಲಿ ಖಂಡಿಸಬೇಕಿದೆ. ವಿಜಯಶಾಲಿಯಾದ ಪಕ್ಷದ ಅರಾಜಕತೆಯನ್ನು ಸಮಾಜದ ಮುಂದಿಡುವ ಸಮಯ ಬಂದಿದೆ ಎನ್ನಲಾಗಿದೆ.
ಮಾಧ್ಯಮಗಳು ಕೂಡಾ ಸತ್ಯ ಏನೆಂಬುದನ್ನು ತಿಳಿಸಬೇಕಿದೆ. ತಮಿಳು ಮಾಧ್ಯಮದಲ್ಲಿ ಬಂಗಾಳದ ಪರಿಸ್ಥಿತಿಯನ್ನು ದರ್ಶಿಸಲಾಗುತ್ತದೆ. ಕಾರಣವಿಲ್ಲದ ಇಂತಹ ಕೃತ್ಯಗಳಲ್ಲಿ ತೊಡಗಿ ಹಿಂಸೆ ವ್ಯಾಪಿಸುವಂತೆ ಮಾಡಿದ ಟಿ.ಎಂ.ಸಿ ಪಕ್ಷದ ನಡೆಯನ್ನು ಖಂಡಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.