ಪುಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘ ಜಾರಿಗೆ ತಂದಿರುವ ಸಮರ್ಥ್ ಭಾರತ್ ಯೋಜನೆಯಡಿ, ಪುಣೆಯ ಕಾರ್ವೆ ನಗರದ ಮಹರ್ಷಿ ಕಾರ್ವೆ ಸ್ತ್ರೀ ಶಿಕ್ಷಾ ಸಂಸ್ಥೆಯ ಬಯಾ ಕಾರ್ವೆ ಹಾಸ್ಟೆಲ್ನಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ. ಪುಣೆ ಮಹಾನಗರ ಪಾಲಿಕೆ (ಪಿಎಮ್ಸಿ) ಮತ್ತು ಜನಕಲ್ಯಾಣ್ ಸಮಿತಿ ವಿವೇಕ್ ವ್ಯಾಸ್ಪೀಠ ಸಹಯೋಗದೊಂದಿಗೆ ಕೇಂದ್ರವನ್ನು ತೆರೆಯಲಾಗಿದೆ.
ಕೇಂದ್ರವು 450 ಹಾಸಿಗೆಗಳನ್ನು ಹೊಂದಿದೆ. ಇಲ್ಲಿ ರೋಗಲಕ್ಷಣವಿಲ್ಲದ, ಆದರೆ ಕೋವಿಡ್ ಪಾಸಿಟಿವ್ ಇರುವ ಮತ್ತು ಹೋಂ ಕ್ವಾರಂಟೈನ್ಗೆ ಜಾಗ ಇಲ್ಲ ರೋಗಿಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ. ಒಂದು ಕೋಣೆಯಲ್ಲಿ ಮೂರು ರೋಗಿಗಳು ಇರುತ್ತಾರೆ. ಇಲ್ಲಿನ ರೋಗಿಗಳಿಗೆ ಚಹಾ, ಉಪಹಾರ, ಎರಡು ಹೊತ್ತಿನ ಊಟ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ತರಬೇತಿ ಪಡೆದ ಎಂಟು ವೈದ್ಯರು, 25 ತರಬೇತಿ ಪಡೆದ ಸದಸ್ಯರು ದಿನದ 24 ಗಂಟೆಯೂ ಇಲ್ಲಿ ಲಭ್ಯವಿರುತ್ತಾರೆ.
ವೈದ್ಯಕೀಯ ಸಲಹೆಯಂತೆ ರೋಗಿಯು 10 ರಿಂದ 12 ದಿನಗಳವರೆಗೆ ಕ್ವಾರಂಟೈನ್ ಆಗಿ ಇಲ್ಲಿ ಉಳಿಯಬಹುದು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ, ಪಾಲಿಕೆಯ ಸಹಾಯದಿಂದ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬಹುದು. ಸಹ್ಯಾದ್ರಿ ಆಸ್ಪತ್ರೆಯ ವೈದ್ಯಕೀಯ ತಜ್ಞರ ತಂಡ ರೋಗಿಗಳ ಆರೈಕೆ ಮಾಡಲಿದೆ. ಕೌನ್ಸೆಲಿಂಗ್ ಸಹ ನೀಡಲಾಗುವುದು ಎಂದು ಪುಣೆ ನಗರದ ಆರ್ಎಸ್ಎಸ್ ಮುಖಂಡ ಮಹೇಶ್ ಕಾರ್ಪೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.