ನವದೆಹಲಿ: ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಮತ್ತು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಇಂದು ದೆಹಲಿಯಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದ್ದಾರೆ.
ಡಾ. ಜೈಶಂಕರ್ ಈ ವೇಳೆ ಮಾತನಾಡಿ, “ಈ ವರ್ಷ ಭಾರತ-ರಷ್ಯಾ ಕಾರ್ಯತಂತ್ರದ ಸಹಭಾಗಿತ್ವದ 22 ನೇ ವರ್ಷ ಮತ್ತು ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವದ 12 ನೇ ವರ್ಷವನ್ನು ಸೂಚಿಸುತ್ತದೆ” ಎಂದಿದ್ದಾರೆ.
ಬಹಳ ನಿಕಟ ಪಾಲುದಾರರಾಗಿ ಅತ್ಯುತ್ಸಾಹದಿಂದ ಉಭಯ ದೇಶಗಳ ನಡುವೆ ಮಾತುಕತೆ ನಡೆಸಲಾಗುವುದು ಎಂಬ ವಿಶ್ವಾಸವನ್ನು ಜೈಶಂಕರ್ ಹೊರಹಾಕಿದ್ದಾರೆ.
ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಮಾತನಾಡಿ, “ಭಾರತ ಮತ್ತು ರಷ್ಯಾ ಕಾರ್ಯತಂತ್ರದ ಸಹಭಾಗಿತ್ವದ ಮೂಲಕ ಬೆಸೆದುಕೊಂಡಿವೆ ಮತ್ತು ಈ ಸಹಭಾಗಿತ್ವದ ಹೃದಯಭಾಗದಲ್ಲಿ ರಾಷ್ಟ್ರಗಳ ನಡುವಿನ ದೀರ್ಘಕಾಲದ ಸ್ನೇಹವಿದೆ” ಎಂದರು.
ಲಾವ್ರೊವ್ ನಿನ್ನೆ ನವದೆಹಲಿಗೆ ಎರಡು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.