ನವದೆಹಲಿ: ʼರಾಷ್ಟ್ರ ಮೊದಲುʼ ಧ್ಯೇಯವನ್ನು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಯಾವಾಗಲೂ ವ್ಯಕ್ತಿಗಿಂತ ಪಕ್ಷ ದೊಡ್ಡದು ಮತ್ತು ಪಕ್ಷಕ್ಕಿಂತ ರಾಷ್ಟ್ರ ದೊಡ್ಡದು ಎಂಬ ಸಿದ್ಧಾಂತದ ಆಧಾರದಲ್ಲಿ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
“ಪಕ್ಷದ ಸಿದ್ಧಾಂತ ಮೇಲೆ ಬಿಜೆಪಿ ಸದಾ ಕೆಲಸ ಮಾಡುತ್ತದೆ, ಪಕ್ಷ ವ್ಯಕ್ತಿಗಿಂತ ದೊಡ್ಡದು ಮತ್ತು ಪಕ್ಷಕ್ಕಿಂತ ರಾಷ್ಟ್ರವು ದೊಡ್ಡದು” ಎಂದು ಪ್ರಧಾನಿ ಮೋದಿ ಅವರು ಬಿಜೆಪಿಯ 41 ನೇ ಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
“ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರಿಂದ ಈ ಸಂಪ್ರದಾಯವು ಆರಂಭಗೊಂಡಿದೆ ಮತ್ತು ಇಲ್ಲಿಯವರೆಗೆ ಮುಂದುವರೆದಿದೆ” ಎಂದು ಪ್ರಧಾನಿ ಹೇಳಿದರು.
“ಭಾರತದ ಜನ ಜನರು ಮತ್ತು ದೇಶದ ಪ್ರತಿಯೊಂದು ಕಣ ಕಣವೂ ಬಿಜೆಪಿಗೆ ಪವಿತ್ರ. ಅವರ ಸೇವೆ ನಮಗೆ ರಾಷ್ಟ್ರ ಸೇವೆ, ಅಧಿಕಾರ ನಮಗೆ ಪವಿತ್ರ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮಾಧ್ಯಮವಾಗಿದೆ, ಹುದ್ದೆ ನಮಗೆ ಕಠಿಣ ಪರಿಶ್ರಮದ ಪರಾಕಾಷ್ಠೆಯನ್ನು ತಲುಪುವ ಹೊಣೆಗಾರಿಕೆಯಾಗಿದ, ಬಿಜೆಪಿ ಕಾರ್ಯಕರ್ತರಾಗಿರುವುದು ನಮಗೆ ಜೀವನ ಮಂತ್ರ” ಎಂದಿದ್ದಾರೆ.
ಕೇಂದ್ರದ ಸಾರ್ವಜನಿಕ ಕಲ್ಯಾಣ ನೀತಿಗಳು ಮತ್ತು ನಿರ್ಧಾರಗಳಿಗೆ ಸಂಬಂಧಿಸಿದಂತೆ ಗೊಂದಲವನ್ನು ಸೃಷ್ಟಿಸಲು ಮತ್ತು ನಾಗರಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ದೇಶದಲ್ಲಿ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿಯೇ ದೇಶದಲ್ಲಿ ವಿವಿಧ ವದಂತಿಗಳನ್ನು ಹರಡಲಾಗುತ್ತಿದೆ. ಸಂವಿಧಾನವನ್ನು ಬದಲಾಯಿಸಲಾಗುತ್ತಿದೆ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇವೆಲ್ಲವೂ ಸುಳ್ಳು. ಅಧಿಕಾರ ಮತ್ತು ಯಶಸ್ಸಿನ ಬಗ್ಗೆ ನಾವು ಸದಾ ವಿನಂಬ್ರತೆಯಿಂದ ಇರಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.