ಮುಂಬಯಿ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯದ ಗೃಹ ಸಚಿವ ಅನಿಲ್ ದೇಶ್ಮುಖ್ ಇಬ್ಬರೂ ನಾರ್ಕೊ ಅನಾಲಿಸಿಸ್ ಟೆಸ್ಟ್ಗೆ ಒಳಗಾಗಬೇಕು ಮತ್ತು ಅವರು ರಾಜೀನಾಮೆಯನ್ನು ನೀಡಬೇಕು ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ರಾಮ್ ಕದಮ್ ಒತ್ತಾಯಿಸಿದ್ದಾರೆ.
“ಮಹಾರಾಷ್ಟ್ರ ಮತ್ತು ಮುಂಬಯಿ ಪೊಲೀಸರ ಘನತೆ ಮುಖ್ಯಮಂತ್ರಿ ಉದ್ಧವ್ ನೇತೃತ್ವದಲ್ಲಿ ಕಳಂಕಿತವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ, ಹಿಂದೆಂದೂ ಇಂತಹ ಘೋರ ಅಪರಾಧ ನಡೆದಿಲ್ಲ. ಇದು ಸಿಎಂ ಅವರ ಕೈ ಕೆಳಗೆ ಸಂಭವಿಸಿದೆ. ಈ ದೇಶ ಮತ್ತು ಇಡೀ ಜಗತ್ತು ಅವರು ಕಳಕಿಂತ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರಿಗೆ ಬೆಂಬಲಿಸುತ್ತಿರುವುದನ್ನು ನೋಡಿದೆ ”ಎಂದು ರಾಮ್ ಕದಮ್ ಆರೋಪಿಸಿದ್ದಾರೆ.
ಇನ್ನೊಬ್ಬ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ಅವರು ಈಗ ಅಮಾನತುಗೊಂಡಿರುವ ಎಪಿಐ ಸಚಿನ್ ವಾಝೆ ಅವರ “ಗ್ಯಾಂಗ್” ಮಹಾರಾಷ್ಟ್ರ ಗೃಹ ಸಚಿವರಿಗೆ 100 ಕೋಟಿ ರೂ.ಸಂಗ್ರಹಿಸಿದೆ ಎಂದು ಆರೋಪಿಸಿದ್ದಾರೆ.
ಕಳೆದ 15 ತಿಂಗಳಿಂದ ಅಧಿಕಾರದಲ್ಲಿರುವ ಠಾಕ್ರೆ ಸರ್ಕಾರವು ಈವರೆಗೆ ಸಂಗ್ರಹಿಸಲಾಗಿರುವ 1500 ಕೋಟಿ ರೂ.ಗಳ ಲೆಕ್ಕ ನೀಡಬೇಕಾಗುತ್ತದೆ ಎಂದು ಸೋಮಯ್ಯ ಹೇಳಿದ್ದಾರೆ
ಈಗ ಸಚಿನ್ ವಾಜೆ, ಸಂಜಯ್ ಪಾಟೀಲ್, ಪರಮ್ ಬಿರ್ ಸಿಂಗ್, ಅನಿಲ್ ದೇಶ್ಮುಖ್ ಮತ್ತು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳನ್ನೂ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಉದ್ಯಮಿ ಮುಖೇಶ್ ಅಂಬಾನಿ ಮನೆ ಮುಂದೆ ವಾಹನದಲ್ಲಿ ಸ್ಪೋಟಕ ಇರಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ಎನ್ಐಎ ಬಂಧನಕ್ಕೆ ಒಳಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.