ನವದೆಹಲಿ : ಬ್ರಿಟನ್ನ ಆಕ್ಸ್ಫರ್ಡ್ನಲ್ಲಿ ಭಾರತೀಯ ವಿದ್ಯಾರ್ಥಿನಿಯ ಮೇಲೆ ವರ್ಣಬೇಧದ ಬಗ್ಗೆ ಸುಳ್ಳಾರೋಪದ ನಿಂದನೆಗಳನ್ನು ಮಾಡಿ ಆಕೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಲಾಗಿತ್ತು.
ಉಡುಪಿಯ ರಶ್ಮಿ ಸಾಮಂತ್ ಅವರು ತಮ್ಮ ಅಧ್ಯಕ್ಷ ಪದವಿಗೆ ರಾಜಿನಾಮೆ ನೀಡಿದ ವಿದ್ಯಾರ್ಥಿನಿಯಾಗಿದ್ದಾರೆ.
ಬಿಜೆಪಿ ಸದಸ್ಯರಾಗಿರುವ ಅಶ್ವಿನಿ ಪ್ರಭು ಅವರು ರಶ್ಮಿ ಸಾಮಂತ್ ಅವರ ರಾಜಿನಾಮೆ ಕುರಿತು ಆತಂಕ ವ್ಯಕ್ತಪಡಿಸಿ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಜೈಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬ್ರಿಟನ್ ಸರಕಾರದ ಜೊತೆ ಉತ್ತಮ ಭಾಂದವ್ಯವಿದ್ದು, ಈ ಘಟನೆಯ ಬಗ್ಗೆ ಆ ಸರ್ಕಾರದ ಜೊತೆಗೆ ಸಮಯ ಸಂದರ್ಭ ನೋಡಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈ ದೇಶದ ಮಹಾತ್ಮಗಾಂಧಿ ಈ ನೆಲದ ವಿಚಾರಗಳನ್ನಿಟ್ಟುಕೊಂಡು ವಿದೇಶದಲ್ಲಿ ವರ್ಣಬೇಧದ ನೀತಿಯ ಬಗ್ಗೆ ಜಾಗೃತಿ ಮೂಡಿಸಿದವರು. ಆ ನೆಲದಿಂದ ಬಂದವರಾದ ನಾವು ಎಂದಿಗೂ ಇಂತಹ ಅನಿಷ್ಟ ನೀತಿಗಳ ಬಗ್ಗೆ ಕುರುಡಾಗಲು ಸಾಧ್ಯವಿಲ್ಲ. ಬಹುಸಂಖ್ಯಾತರಾಗಿರುವ ಅನಿವಾಸಿ ಭಾರತೀಯರು ಇರುವ ಸ್ಥಳದಲ್ಲಿ ಈ ರೀತಿಯ ಪ್ರಕರಣಗಳು ಆದಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಉತ್ತರಿಸಿದರು.
ಆಕ್ಸ್ಫರ್ಡ್ ನ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಗೊಂಡ ಮೊದಲ ಭಾರತೀಯ ಮಹಿಳೆ ರಶ್ಮಿ ಸಮಂತ್ ಆಗಿದ್ದರು. ಇವರು ಮೂಲತಃ ಮಂಗಳೂರಿನವರಾಗಿದ್ದರು. ಇಲ್ಲಿನ ಪತ್ರಿಕೆಗಳು ಅವರ ಬಗ್ಗೆ ವರದಿಗಳನ್ನು ಕೂಡ ಪ್ರಕಟಿಸಿ ಹರ್ಷವನ್ನು ವ್ಯಕ್ತಪಡಿಸಿತ್ತು. ಆದರೆ ಆಯ್ಕೆಗೊಂಡ 5 ದಿನದಲ್ಲೇ ಅವರು ಅಲ್ಲಿ ಅನೇಕ ರೀತಿಯ ನಿಂದನೆಗಳನ್ನು ಎದುರಿಸಬೇಕಾಯಿತು. ಅವರ ಹಿಂದಿನ ಫೇಸ್ಬುಕ್ ಪೇಜ್ಗಳನ್ನು ಕೆದಕಿ ಅವರನ್ನು ವರ್ಣಬೇಧ ನೀತಿ ಅನುಸರಿಸುತ್ತಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಯಿತು. ಅಲ್ಲಿನ ಬೋಧಕ ವರ್ಗ ಇವರ ಹಿಂದೂ ಧಾರ್ಮಿಕ ನಂಬಿಕೆಗಳನ್ನು ನಿಂದಿಸಿದರು. ಈ ಎಲ್ಲದರ ಪರಿಣಾಮ ರಶ್ಮಿ ಸಾಮಂತ್ ಅವರು ಉನ್ನತ ಜವಬ್ದಾರಿಗೆ ಬೇಸರದಿಂದಲೇ ರಾಜಿನಾಮೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.