ನವದೆಹಲಿ: 98,328 ಕೋಟಿ ರೂ. ಗಳ ತೆರಿಗೆ ವಿವಾದಗಳ ಪರಿಹಾರಕ್ಕಾಗಿ ಸರ್ಕಾರವು ಒಟ್ಟು 1,28,733 ಡಿಕ್ಲರೇಷನ್ ಸ್ವೀಕರಿಸಿದೆ ಮತ್ತು ವಿವಾದ್ ಸೆ ವಿಶ್ವಾಸ್ ಯೋಜನೆಯಡಿ 2021 ರ ಮಾರ್ಚ್ 1 ರವರೆಗೆ ತೆರಿಗೆ ಪಾವತಿದಾರರಿಂದ 53,346 ಕೋಟಿ ರೂ.ಪಾವತಿ ಆಗಿದೆ.
ಇವುಗಳಲ್ಲಿ ಕೇಂದ್ರ ಸಾರ್ವಜನಿಕ ವಲಯದ ಘಟಕಗಳ (ಪಿಎಸ್ಯು) 1,393 ಮತ್ತು ರಾಜ್ಯ ಮಂಡಳಿಗಳ 833 ಡಿಕ್ಲರೇಷನ್ ಸೇರಿವೆ.
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಸೋಮವಾರ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಹೆಚ್ಚಿನ ಸಂಖ್ಯೆಯ ಬಾಕಿ ಇರುವ ತೆರಿಗೆ ವಿವಾದಗಳ ಸೌಹಾರ್ದಯುತ ಪರಿಹಾರವು ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು. ದಾವೆಗಳಲ್ಲಿ ನಿರ್ಬಂಧಿಸಲಾದ ಆದಾಯದ ಸಂಗ್ರಹವು ಸರ್ಕಾರಕ್ಕೆ ದೊರೆತ ಹೆಚ್ಚುವರಿ ಪ್ರಯೋಜನವಾಗಿದೆ.
ಅರ್ಹತಾ ದಿನಾಂಕದಂದು ಬಾಕಿ ಇರುವ ತೆರಿಗೆ ವಿವಾದಗಳ ಸಂಖ್ಯೆ 5,10,491 ಆಗಿದೆ. 1,28,733 ಡಿಕ್ಲರೇಷನ್ಗಳು ಬಾಕಿ ಉಳಿದಿರುವ 1,43,126 ವಿವಾದಗಳಿಗೆ ಸಂಬಂಧಿಸಿವೆ. ಹೀಗಾಗಿ, ಯೋಜನೆಯಡಿ ಪಡೆದ ಡಿಕ್ಲರೇಷನ್ಗಳು ಬಾಕಿ ಉಳಿದಿರುವ ತೆರಿಗೆ ವಿವಾದಗಳಲ್ಲಿ ಶೇಕಡಾ 28 ಕ್ಕಿಂತ ಹೆಚ್ಚು ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.