ಲಕ್ನೋ: ಬಿಜೆಪಿ ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಉತ್ತರ ಪ್ರದೇಶ ಕಂದಾಯ ಇಲಾಖೆ ಈವರೆಗೆ 67,000 ಎಕರೆ ಭೂಮಿಯನ್ನು ಭೂ ಮಾಫಿಯಾದಿಂದ ಮುಕ್ತಗೊಳಿಸಿದೆ ಮತ್ತು ಅಲ್ಲಿ ಕ್ರೀಡಾ ಮೈದಾನವನ್ನು ನಿರ್ಮಾಣ ಮಾಡಲು ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ವಿಧಾನ ಪರಿಷತ್ತಿಗೆ ತಿಳಿಸಿದರು.
ಎಂಎಲ್ ಸಿ ಸುರೇಶ್ ಕುಮಾರ್ ತ್ರಿಪಾಠಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆದಿತ್ಯನಾಥ್, “2017 ರಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ, ಅತಿಕ್ರಮಿಸಲ್ಪಟ್ಟ ಸಾರ್ವಜನಿಕ ಮತ್ತು ಖಾಸಗಿ ಭೂಮಿಯನ್ನು ಮುಕ್ತಗೊಳಿಸಲು ಭೂ ವಿರೋಧಿ ಮಾಫಿಯಾ ಕಾರ್ಯಪಡೆ ರಚಿಸಲಾಯಿತು. ಈ ಕಾರ್ಯಪಡೆ ಇದುವರೆಗೆ ಕಂದಾಯ ಇಲಾಖೆಯ 67,000 ಎಕರೆ ಭೂಮಿಯನ್ನು ಮಾಫಿಯಾದ ಕೈಯಿಂದ ಬಿಡುಗಡೆ ಮಾಡಿದೆ” ಎಂದಿದ್ದಾರೆ.
“ಕ್ರೀಡಾ ವಿಭಾಗದ ಅಡಿಯಲ್ಲಿ, ಯುವ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅಥವಾ ಮನ್ರೇಗಾ ಅಡಿಯಲ್ಲಿ ಕ್ರೀಡಾ ಮೈದಾನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ನಮ್ಮ ಪ್ರಯತ್ನವೆಂದರೆ ಕ್ರೀಡಾ ಮೈದಾನವನ್ನು ಪಂಚಾಯತ್ ಮಟ್ಟದಲ್ಲಿ ಮಾಡಬೇಕು ಎಂಬುದು” ಎಂದಿದ್ದಾರೆ.
“ಅಗತ್ಯವಿದ್ದರೆ ಜಮೀನು ವಿನಿಮಯ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೆ ಸಾವಿರಾರು ಗ್ರಾಮ ಪಂಚಾಯಿತಿಗಳಲ್ಲಿ ಕ್ರೀಡಾ ಮೈದಾನಗಳನ್ನು ನಿರ್ಮಾಣ ಮಾಡಲಾಗಿದೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.