ನವದೆಹಲಿ: ಒಂದು ರಾಷ್ಟ್ರ, ಒಂದು ಮಾನದಂಡ ಪ್ರಾರಂಭಿಸುವ ಸಮಯ ಬಂದಾಗಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ.
“ಮಾನದಂಡಗಳನ್ನು ನಿಗದಿಪಡಿಸುವಲ್ಲಿ, ಜಾಗತಿಕ ಮಾನದಂಡಗಳನ್ನು ರೂಪಿಸುವಲ್ಲಿ ಭಾರತವನ್ನು ನಾಯಕನನ್ನಾಗಿ ಮಾಡುವ ಸಮಯ ಬಂದಿದೆ. ಗುಣಮಟ್ಟದ ಪ್ರಮಾಣೀಕರಣ ಪಡೆಯಲು ವಿದೇಶಕ್ಕೆ ಹೋಗುವ ಅಗತ್ಯವನ್ನು ಯಾರೂ ಭಾವಿಸಬಾರದು” ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕಾರ್ಯವನ್ನು ಪರಿಶೀಲಿಸಿದ ಬಳಿಕ ಗೋಯಲ್ ಹೇಳಿದರು.
ಭಾರತದಲ್ಲಿ ಲ್ಯಾಬ್ ಪರೀಕ್ಷೆ ವಿಶ್ವ ಗುಣಮಟ್ಟದ್ದಾಗಿರಬೇಕು ಎಂದು ಗೋಯಲ್ ಹೇಳಿದರು, ಆಧುನಿಕ ಉಪಕರಣಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಅಲ್ಲಿ ಬಳಸಬೇಕು ಎಂದು ಒತ್ತಿ ಹೇಳಿದರು.
ಉತ್ಪಾದನೆ ಮತ್ತು ಸೇವೆಗಳ ಎಲ್ಲಾ ಕ್ಷೇತ್ರಗಳನ್ನು ಮಾನದಂಡದ ರಾಷ್ಟ್ರೀಯ ಕಾರ್ಯಾಚರಣೆಯಲ್ಲಿ ಸೇರಿಸಲಾಗಿದ್ದರೂ, ಎಲ್ಲಾ ರೀತಿಯ ಸಾರ್ವಜನಿಕ ಸಂಗ್ರಹಣೆ ಮತ್ತು ಟೆಂಡರಿಂಗ್ನಲ್ಲಿ ರಾಷ್ಟ್ರೀಯ ಏಕರೂಪತೆ ಮತ್ತು ಪ್ರಮಾಣೀಕರಣವನ್ನು ತರುವುದು ತಕ್ಷಣದ ಾಗತ್ಎಂಯವಾಗಿದೆ ಎಂದು ಗೋಯಲ್ ಒತ್ತಿ ಹೇಳಿದರು.
ರಾಷ್ಟ್ರದ ಶಕ್ತಿ ಮತ್ತು ಸ್ವಭಾವವನ್ನು ಕೆಲವೊಮ್ಮೆ ಅದರ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟಕ್ಕಾಗಿ ನಿಗದಿಪಡಿಸಿದ ಮಾನದಂಡಗಳಿಂದ ಅಳೆಯಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.