ನವದೆಹಲಿ: ಬಹುಮತವನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ನಾರಾಯಣಸಾಮಿ ನೇತೃತ್ವದ ಪುದುಚೇರಿ ಸರ್ಕಾರಕ್ಕೆ ಅಲ್ಲಿನ ನೂತನ ಲೆಫ್ಟಿನೆಂಟ್ ಗವರ್ನರ್ ಡಾ.ತಮಿಳಿಸೈ ಸೌಂದರರಾಜನ್ ಅವರು ನಿರ್ದೇಶನ ನೀಡಿದ್ದಾರೆ.
ಇದಕ್ಕಾಗಿ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಫೆಬ್ರವರಿ 22 ರಂದು ಕರೆಯಲಾಗಿದೆ.
ಅಧಿವೇಶನವನ್ನು ಒಂದೇ ಕಾರ್ಯಸೂಚಿಗೆ ಸೀಮಿತಗೊಳಿಸಲಾಗುತ್ತಿದೆ. ಈಗಿನ ಮುಖ್ಯಮಂತ್ರಿ ಸದನದ ವಿಶ್ವಾಸವನ್ನು ಹೊಂದಿದ್ದಾರೆಯೇ ಎಂಬುದನ್ನು ನಿರ್ಧರಿಸಲಿದೆ ಎಂದು ರಾಜ್ ನಿವಾಸ್ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮತದಾನ ಪ್ರಕ್ರಿಯೆ ಕೈಗಳನ್ನು ಎತ್ತಿ ವಿಶ್ವಾಸ ಪ್ರದರ್ಶನದ ಮೂಲಕ ನಡೆಯುತ್ತದೆ ಮತ್ತು ಸಂಪೂರ್ಣ ಕಲಾಪವನ್ನು ವಿಡಿಯೋಗ್ರಾಫ್ ಮಾಡಲಾಗುತ್ತದೆ. ಬಹುಮತ ಪರೀಕ್ಷೆಯನ್ನು ಫೆ. 22 ರಂದು ಸಂಜೆ 5 ಗಂಟೆಯ ಮೊದಲು ತೀರ್ಮಾನಿಸಲಾಗುವುದು ಎಂದು ಹೇಳಲಾಗಿದೆ.
ಆಡಳಿತಾರೂಢ ಕಾಂಗ್ರೆಸ್-ಡಿಎಂಕೆ ಮೈತ್ರಿ ಮತ್ತು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವು 33 ಸದಸ್ಯರ ವಿಧಾನಸಭೆಯಲ್ಲಿ ತಲಾ 14 ಶಾಸಕರನ್ನು ಹೊಂದಿದ್ದು, ಇದರಲ್ಲಿ ಮೂರು ನಾಮನಿರ್ದೇಶಿತ ಶಾಸಕರು ಸೇರಿದ್ದಾರೆ. ಪ್ರಸ್ತುತ ವಿಧಾನಸಭೆ 28 ಸಕ್ರಿಯ ಶಾಸಕರನ್ನು ಮಾತ್ರ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.