ನವದೆಹಲಿ: ಜ್ಞಾನ ಮತ್ತು ಸಾಮರ್ಥ್ಯ ಸಾಕಷ್ಟು ಜವಾಬ್ದಾರಿಯೊಂದಿಗೆ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ವಿಶ್ವ ಭಾರತಿ ವಿಶ್ವದ್ಯಾಲಯದ ಘಟಿಕೋತ್ಸವ ಸಮಾರಂಭವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಭಾರತಿ ಕೇವಲ ವಿಶ್ವವಿದ್ಯಾನಿಲಯವಲ್ಲ, ರೋಮಾಂಚಕ ಸಂಪ್ರದಾಯದ ಒಂದು ಭಾಗವಾಗಿದೆ ಎಂದು ಹೇಳಿದರು.
ಗುರುದೇವ್ ಅವರು ವಿಶ್ವ ಭಾರತಿಯನ್ನು ಕೇವಲ ವಿಶ್ವವಿದ್ಯಾನಿಲಯವಾಗಿ ನೋಡಬೇಕೆಂದು ಬಯಸಿದ್ದರೆ, ಅವರು ಅದಕ್ಕೆ ಕೇವಲ ವಿಶ್ವವಿದ್ಯಾಲಯ ಎಂದು ಹೆಸರಿಡುತ್ತಿದ್ದರು, ಆದರೆ ಅದಕ್ಕೆ ಅವರು ವಿಶ್ವ ಭಾರತಿ ವಿಶ್ವವಿದ್ಯಾಲಯ ಎಂದು ಹೆಸರಿಟ್ಟರು.
ಶ್ರೇಷ್ಠ ಶೈಕ್ಷಣಿಕ ಸಂಸ್ಥೆಯ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುವುದು ಸ್ಪೂರ್ತಿದಾಯಕ ಮತ್ತು ಸಂತೋಷಕರ ಕ್ಷಣ ಎಂದು ಅವರು ಹೇಳಿದರು.
ವಿಶ್ವವಿದ್ಯಾನಿಲಯಗಳು ಅಂತ್ಯವಿಲ್ಲದ ಜ್ಞಾನ ಮತ್ತು ಕೌಶಲ್ಯ ಒದಗಿಸುತ್ತವೆ. ಜ್ಞಾನ ಎಂಬುದು ಸ್ಥಿರವಲ್ಲ, ಸದಾ ವಿಕಸನಗೊಳ್ಳುತ್ತವೆ ಎಂದು ಮೋದಿ ಹೇಳಿದರು.
ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವುದಾಗಿ ವಿಶ್ವ ಭಾರತಿಯ ಕಾರ್ಯವನ್ನು ಅವರು ಶ್ಲಾಘಿಸಿದರು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಒಟ್ಟು 2,535 ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದಾರೆ. ವಿಶ್ವ ಭಾರತಿಯನ್ನು ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರು 1921 ರಲ್ಲಿ ಸ್ಥಾಪಿಸಿದರು. ಇದು ದೇಶದ ಅತ್ಯಂತ ಹಳೆಯ ಕೇಂದ್ರ ವಿಶ್ವವಿದ್ಯಾಲಯವಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.