ನವದೆಹಲಿ : ಇಲ್ಲಿನ ಸಿಂಘ್ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತ ಮುಖಂಡರನ್ನು ಗುರಿಯಾಗಿಸಲು ಖಲಿಸ್ಥಾನ್ ಕಮಾಂಡೋ ಪೋರ್ಸ್ (ಕೆಸಿಎಫ್) ಸಂಚು ಹೂಡಿತ್ತು ಎನ್ನುವ ಆಶ್ವರ್ಯಕರ ಸಂಗತಿಯನ್ನು ಭಾರತೀಯ ಗುಪ್ತಚರ ವಿಭಾಗ RAW ಪತ್ತೆ ಮಾಡಿದೆ ಎಂದು ಎಎನ್ಐ ವರದಿ ಮಾಡಿದೆ.
ಭಯೋತ್ಪಾದಕ ಸಂಘಟನೆಯಾದ ಕೆಸಿಎಫ್ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗುಪ್ತಚರ ಸಂಸ್ಥೆಗಳ ರೇಡಾರ್ ಅಡಿಯಲ್ಲಿದೆ.
ಬೆಲ್ಜಿಯಂ ಮತ್ತು ಯುನೈಟೆಡ್ ಕಿಂಗ್ಡಮ್ನ ಸಂಚುಕೋರರು ಸಂಘಟಿತ ರೀತಿಯಲ್ಲಿ ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತ ನಾಯಕನನ್ನು ಕೊಲ್ಲುವ ಯೋಜನೆ ಸಿದ್ಧಪಡಿಸಿದ್ದರು ಎನ್ನುವ ಮಾಹಿತಿ ಈಗ ಬಹಿರಂಗವಾಗಿದೆ.
ಖಲಿಸ್ಥಾನ್ ಕಮಾಂಡೋ ಫೋರ್ಸ್ ಭಾರತದಲ್ಲಿ ವಿವಿಧ ಹತ್ಯಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಘಟನೆಯಾಗಿದೆ. ಈ ಸಂಘಟನೆಯ ಸದಸ್ಯರು ಕೆನಡಾ, ಯುನೈಟೆಡ್ ಕಿಂಗ್ಡಮ್, ಬೆಲ್ಜಿಯಂ ಮತ್ತು ಪಾಕಿಸ್ಥಾನದಂತಹ ದೇಶಗಳಲ್ಲಿ ಸಕ್ರಿಯರಾಗಿದ್ದಾರೆ.
ಭಾರತದ ಗುಪ್ತಚರ ಇಲಾಖೆ ರಾಗೆ ಸಿಕ್ಕ ಮಾಹಿತಿಯ ಪ್ರಕಾರ, ದೇಶದಲ್ಲಿ ನಡೆಯುತ್ತಿರುವ ರೈತ ನಾಯಕರನ್ನು ಕೊಲ್ಲುವ ಮೂಲಕ ಭಾರತದಲ್ಲಿ ಹಿಂಸಾಚಾರವನ್ನು ಎಬ್ಬಿಸುವ ಬೃಹತ್ ಷಡ್ಯಂತ್ರವನ್ನು ಈ ಸಂಘಟನೆ ಹೆಣೆದಿತ್ತು ಎನ್ನಲಾಗಿದೆ ಮತ್ತು ಈ ಹತ್ಯೆಯನ್ನು ಸರ್ಕಾರ ಮತ್ತು ಆಡಳಿತ ಪಕ್ಷದ ಕಾರ್ಯಕರ್ತರ ಮೇಲೆ ಹೊರೆಸುವಂತ ಉದ್ದೇಶವನ್ನಿಟ್ಟುಕೊಂಡಿತ್ತು.
ರೈತ ಪ್ರತಿಭಟನೆಯ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳು ಮಾಡುವ ಸಂಚು ಒಂದೊಂದಾಗಿಯೇ ಹೊರಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.