ಗಯಾ: ಬಿಹಾರದ ಗಯಾ ಜಿಲ್ಲೆಯ ಬೆಲಗಂಜ್ ಬ್ಲಾಕ್ ಪ್ರದೇಶದ ಇಮಾಲಿಯಾಚಕ್ ಎಂಬ ಸಣ್ಣ ಹಳ್ಳಿಯ ಸತ್ಯೇಂದ್ರ ಗೌತಮ್ ಮಾಂಝ್ಹಿ ಅವರು ಫಾಲ್ಗು ನದಿಯ ದ್ವೀಪದ ಬಂಜರು ಭೂಮಿಯಲ್ಲಿ ಬೃಹತ್ ತೋಟವನ್ನು ಬೆಳೆಸಿ ಎಲ್ಲ ಪ್ರಶಂಸೆಗೆ ಪಾತ್ರರಾಗಿದ್ದಾರೆ.
15 ವರ್ಷಗಳ ಹಿಂದೆ ‘ಪರ್ವತ ಮನುಷ್ಯ’ ದಶರಥ್ ಮಾಂಝ್ಹಿ ಅವರಿಂದ ಸ್ಫೂರ್ತಿ ಪಡೆದ ಇವರು, 10,000 ಮರಗಳನ್ನು ಈ ದ್ವೀಪದ ಬಂಜರು ಭೂಮಿಯಲ್ಲಿ ನೆಟ್ಟರು. ಹೆಚ್ಚಾಗಿ ಪೇರಳೆ ಮರವನ್ನು ಇವರ ತೋಟದ ಒಳಗೊಂಡಿದೆ.
ಒಂದು ದಿನ ಇವರ ಮನೆಗೆ ಬಂದಿದ್ದ ಮಾಂಝ್ಹಿ ಇಲ್ಲಿ ಹೆಣ್ಣಿನ ಮರದ ತೋಟ ಬೆಳೆಸುವಂತೆ ಇವರಿಗೆ ಸಲಹೆ ನೀಡಿದ್ದರು. ಆ ಸಮಯದಲ್ಲಿ ಈ ಸ್ಥಳವು ಬಂಜರು ಮತ್ತು ನಿರ್ಜನವಾಗಿತ್ತು ಮತ್ತು ಎಲ್ಲೆಡೆ ಮರಳು ಮಾತ್ರ ಇತ್ತು. ಆರಂಭದಲ್ಲಿ ಇದು ತುಂಬಾ ಕಷ್ಟದ ಕೆಲಸ ಎಂದು ಸತ್ಯೇಂದ್ರ ಗೌತಮ್ ಮಾಂಝ್ಹಿ ಅವರಿಗೆ ಅನಿಸಿತ್ತು. ಆದರೆ ಛಲ ಬಿಡದೆ ಗಿಡ ನೆಟ್ಟರು, ಮನೆಯಿಂದ ಒಂದು ಪಾತ್ರೆಯಲ್ಲಿ ನೀರನ್ನು ತಂದು ಸಸ್ಯಗಳಿಗೆ ಹಾಕಿ ಅವುಗಳನ್ನು ಬೆಳೆಸಿದರು.
ಈ ಬಗ್ಗೆ ಮಾತನಾಡಿದ ಅವರು, “ಪ್ರಾಣಿಗಳು ಸಸ್ಯಗಳನ್ನು ನಾಶಮಾಡುತ್ತಿದ್ದವು. ನಾನು ಕಾಡಿನಿಂದ ಮುಳ್ಳಿನ ಪೊದೆಗಳನ್ನು ತಂದು ಬೇಲಿ ಮಾಡಿದ್ದೇನೆ. ಈ ಬೇಲಿ ಇನ್ನೂ ನನ್ನ ತೋಟವನ್ನು ರಕ್ಷಿಸುತ್ತಿದೆ” ಎಂದು ಹೇಳಿದ್ದಾರೆ.
“ಪರಿಸರ ಸಂರಕ್ಷಣೆಗೆ ನನ್ನ ಕೊಡುಗೆಯ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮಾಹಿತಿ ತಿಳಿದ ಮೇಲೆ ನನ್ನನ್ನು ಮಕ್ಕಳ ರಕ್ಷಣಾ ಆಯೋಗದ ಸದಸ್ಯನನ್ನಾಗಿ ಮಾಡಲಾಯಿತು” ಎಂದು ಅವರು ಹೇಳಿದ್ದಾರೆ.
ಸತ್ಯೇಂದ್ರ ಗೌತಮ್ ಮಾಂಝ್ಹಿ ಮಗಧ್ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದಿದ್ದಾರೆ.
ಮಕ್ಕಳ ಸಂರಕ್ಷಣಾ ಆಯೋಗದ ಹಿಂದಿನ ಸದಸ್ಯ ಮತ್ತು ಪ್ರಸ್ತುತ ಮಗಧ್ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿರುವ ಮಾಂಝ್ಹಿ ಇನ್ನೂ ತಮ್ಮ ಹಣ್ಣಿನ ತೋಟವನ್ನು ನೋಡಿಕೊಳ್ಳುತ್ತಲೇ ಇದ್ದಾರೆ.
ಹೆಚ್ಚಿನ ಪೇರಳೆಗಳು ಅಲಹಾಬಾದ್ ಪೇರಳೆ ರೂಪಾಂತರವಾಗಿದ್ದು, ಇದನ್ನು ಉತ್ತಮ ಗುಣಮಟ್ಟದ್ದೆಂದು ಪರಿಗಣಿಸಲಾಗಿದೆ. ನಾನು ಈಗ ಪೇರಳೆ ಮಾರಾಟ ಮಾಡುವ ಮೂಲಕ ಲಾಭ ಗಳಿಸಲು ಪ್ರಾರಂಭಿಸಿದ್ದೇನೆ ಎಂದು ಅವರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.