ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ (ಪಿಎಂಕೆಎಸ್ವೈ) ಅಡಿಯಲ್ಲಿ ಒಟ್ಟು 32 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಈ ಯೋಜನೆಗಳು ಸುಮಾರು 17 ರಾಜ್ಯಗಳಲ್ಲಿ ಹರದಿದ್ದು, ಇದು 406 ಕೋಟಿ ರೂಪಾಯಿಗಳ ಮೌಲ್ಯದ ಹೂಡಿಕೆಯನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವೆ ಹರ್ಸಿಮ್ರಾಟ್ ಕೌರ್ ಬಾದಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಂತರ್-ಸಚಿವಾಲು ಅನುಮೋದನೆ ಸಮಿತಿಯ ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
”ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ರೈತರನ್ನು ಗ್ರಾಹಕರೊಂದಿಗೆ ಜೋಡಿಸುವಲ್ಲಿ ಆಹಾರ ಸಂಸ್ಕರಣೆಗೆ ಪ್ರಮುಖ ಪಾತ್ರವಿದೆ. ಪ್ರಸ್ತಾಪಿತ ಯೋಜನೆಗಳು ಸುಮಾರು 15000 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಿವೆ. ಆಹಾರಕ್ಕಾಗಿ ಆಧುನಿಕ ಸಂಸ್ಕರಣಾ ತಂತ್ರಗಳನ್ನು ಪರಿಚಯಿಸುವುದರಿಂದ ಕೃಷಿ ಉತ್ಪನ್ನಗಳ ಸುಧಾರಿತ ಜೀವನ ಮತ್ತು ರೈತರಿಗೆ ಸ್ಥಿರವಾದ ಆದಾಯವನ್ನು ಈ ಯೋಜನೆಗಳು ಖಚಿತಪಡಿಸಲಿವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಆಹಾರ ಸಂಸ್ಕರಣಾ ಉದ್ಯಮವು ರೈತರು, ಸರ್ಕಾರ ಮತ್ತು ನಿರುದ್ಯೋಗಿ ಯುವಕರ ನಡುವಿನ ಆರ್ಥಿಕತೆಯಾಗಿ, ಉತ್ತಮ ಕೊಡುಗೆಯಾಗಿ ಕೆಲಸ ಮಾಡಬಹುದು, ಈ ವ್ಯವಹಾರದಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಕೇಂದ್ರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ” ಎಂದಿದೆ
ಸಭೆಯು ಜಂಟಿ ಉದ್ಯಮಗಳು, ವಿದೇಶಿ ಸಹಯೋಗಗಳು, ಕೈಗಾರಿಕಾ ಪರವಾನಗಿಗಳು ಮತ್ತು ಶೇಕಡಾ 100 ರಫ್ತು ಆಧಾರಿತ ಘಟಕಗಳ ಪ್ರಸ್ತಾಪಗಳನ್ನು ಅನುಮೋದಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Hon. Union Minister, FPI, Smt. @HarsimratBadal_ chaired the second Inter Ministerial Approval Committee (#IMAC) meet in a week, clearing 32 projects leveraging investment worth Rs 406 crores under the Unit Scheme. It shall generate employment for 15 thousand people. pic.twitter.com/tf4cRFV5tc
— FOOD PROCESSING MIN (@MOFPI_GOI) February 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.