ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ದೇಶವ್ಯಾಪಿಯಾಗಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಹಿಂಸೆ ಮತ್ತು ದೊಂಬಿಗಳಲ್ಲಿ ತೊಡಗಿರುವ ಜನರನ್ನು ಮುನ್ನಡೆಸವವರು ನಾಯಕರಲ್ಲ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ರಾವತ್ ಪ್ರತಿಭಟನೆಗೆ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಿದ್ದು, “ನಾಯಕತ್ವ ಎಂದರೆ ನೇತೃತ್ವವನ್ನು ವಹಿಸುವುದು. ಹಾಗಾದರೆ ನಾಯಕತ್ವದಲ್ಲಿ ಸಂಕೀರ್ಣವಾದುದು ಯಾವುದು? ನೇತೃತ್ವ ವಹಿಸುವುದೇ? ಯಾಕೆಂದರೆ ಒಬ್ಬರು ಮುನ್ನಡೆದಾಗ ಎಲ್ಲರೂ ಹಿಂಬಾಲಿಸುತ್ತಾರೆ. ಇದು ಅಷ್ಟೊಂದು ಸರಳವಾದುದಲ್ಲ. ಆದರೆ ಸರಳವಾದಂತೆ ಕಾಣುತ್ತದೆ. ಇದು ತುಂಬಾ ಸಂಕೀರ್ಣ ವಿದ್ಯಾಮಾನವಾಗಿದೆ. ಜನಸಮೂಹದ ಮಧ್ಯೆ ನಾವು ನಾಯಕನ್ನು ಹುಡುಕುತ್ತೇವೆ. ಆದರೆ ನಾಯಕ ಸರಿಯಾದ ದಿಶೆಯಲ್ಲಿ ಮುನ್ನಡೆಸುವವನು ಆಗಿರುತ್ತಾನೆ. ತಪ್ಪು ಮಾರ್ಗದಲ್ಲಿ ಜನರನ್ನು ಮುನ್ನಡೆಸುವವ ನಾಯಕನಾಗಲಾರ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು ದೇಶದಾದ್ಯಂತ ದೊಂಬಿ, ಗಲಭೆಗಳನ್ನು ಎಬ್ಬಿಸುವ ನೇತೃತ್ವವನ್ನು ವಹಿಸಿರುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಇದು ನಾಯಕತ್ವ ಅಲ್ಲ” ಎಂದಿದ್ದಾರೆ.
ತಮ್ಮ ಹೇಳಿಕೆಯ ಮೂಲಕ ರಾವತ್ ಅವರು ಹಿಂಸಾತ್ಮಕ ಪ್ರತಿಭಟನೆಯನ್ನು ಕಟುವಾಗಿ ಖಂಡಿಸಿದ್ದಾರೆ.
ಡಿಸೆಂಬರ್ 31ರಂದು ಜನರಲ್ ಬಿಪಿನ್ ರಾವತ್ ಅವರು ನಿವೃತ್ತರಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.