ನವದೆಹಲಿ: ಇಂದು ಆಗಸದಲ್ಲಿ ಖಗೋಳ ಕೌತುಕ ನಡೆಯಿತು. ಸೂರ್ಯ ಚಂದ್ರನಿಗೆ ಕಂಕಣ ತೊಡುವ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ದೇಶದ ಉದ್ದಗಲದ ಜನರು ಕುತೂಹಲಭರಿತರಾಗಿದ್ದರು. ಕೆಲವೊಂದು ಕಡೆ ಕಂಕಣ ಗ್ರಹಣ ಅತ್ಯಂತ ಸ್ಪಷ್ಟವಾಗಿ ಗೋಚರಿಸಿದರೆ, ಕೆಲವು ಕಡೆಗಳಲ್ಲಿ ಮೋಡಗಳು ಬೆಂಕಿ ಉಂಗುರದ ಸೂರ್ಯನನ್ನು ನೋಡಲು ಅವಕಾಶ ಮಡಿಕೊಡಲೇ ಇಲ್ಲ.
ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೂ ಮೋಡಗಳು ಸೂರ್ಯನನ್ನು ನೋಡುವ ಅವಕಾಶವನ್ನು ದೊರಕಿಸಿಕೊಟ್ಟಿಲ್ಲ. ಈ ಬಗ್ಗೆ ಟ್ವಿಟ್ ಮಾಡಿ ಮೋದಿ ನಿರಾಸೆ ವ್ಯಕ್ತಪಡಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, “ಬಹುತೇಕ ಭಾರತೀಯರಂತೆ ನಾನು ಕೂಡ ಸೂರ್ಯಗ್ರಹಣವನ್ನು ವೀಕ್ಷಿಸಲು ಉತ್ಸಾಹಭರಿತನಾಗಿದ್ದೆ. ಆದರೆ ಮೋಡಗಳ ಕಾರಣದಿಂದ ಗ್ರಹಣ ಕಾಣಿಸಲಿಲ್ಲ. ಆದರೆ ಕೋಯಿಕೋಡ್ ಮತ್ತು ಇತರ ಭಾಗದಲ್ಲಿ ಕಾಣಿಸಿಕೊಂಡು ಸೂರ್ಯಗ್ರಹಣವನ್ನು ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಿದೆ. ಈ ವಿಷಯದ ಬಗ್ಗೆ ತಜ್ಞರಿಂದ ಮಾಹಿತಿಯನ್ನು ಪಡೆದುಕೊಂಡು ನನ್ನ ಜ್ಞಾನವನ್ನು ವೃದ್ಧಿಸಿಕೊಂಡೆ” ಎಂದಿದ್ದಾರೆ.
ದೇಶದ ಕೆಲವು ಭಾಗಗಳಲ್ಲಿ ಮೋಡದಿಂದಾಗಿ ಗ್ರಹಣವನ್ನು ವೀಕ್ಷಣೆ ಮಾಡುವ ಸದಾವಕಾಶ ಜನರಿಗೆ ಸಿಗಲಿಲ್ಲ. ಆದರೆ ಕೆಲವು ಕಡೆಗಳಲ್ಲಿ ಗ್ರಹಣವನ್ನು ಸಷ್ಟವಾಗಿ ನೋಡುವ ಅವಕಾಶ ಜನರಿಗೆ ಸಿಕ್ಕಿದೆ.
Like many Indians, I was enthusiastic about #solareclipse2019.
Unfortunately, I could not see the Sun due to cloud cover but I did catch glimpses of the eclipse in Kozhikode and other parts on live stream. Also enriched my knowledge on the subject by interacting with experts. pic.twitter.com/EI1dcIWRIz
— Narendra Modi (@narendramodi) December 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.