ನವದೆಹಲಿ: ದಶಕದ ಕೊನೆಯ ಸೂರ್ಯಗ್ರಹಣ ಗುರುವಾರ ಬೆಳಿಗ್ಗೆ ಭಾರತ ಸೇರಿದಂತೆ ವಿಶ್ವದ ಹಲವಾರು ಭಾಗಗಳಲ್ಲಿ ಕಾಣಿಸಿಕೊಂಡಿತು. ಇಂದಿನ ಸೂರ್ಯಗ್ರಹಣವನ್ನು ವಾರ್ಷಿಕ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಇದರಲ್ಲಿ ಚಂದ್ರನು ಸೂರ್ಯನ ಬೆಳಕನ್ನು ಭಾಗಶಃ ನಿರ್ಬಂಧಿಸಿದ್ದಾನೆ, ಇದರಿಂದ ಸೂರ್ಯನು ಬೆಂಕಿಯ ಉಂಗುರದಂತೆ ಗೋಚರಿಸಿದ್ದಾನೆ. ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಕೇರಳಗಳಲ್ಲಿ ಸೂರ್ಯ ಗ್ರಹಣ ಸ್ಪಷ್ಟವಾಗಿ ಗೋಚರಿಸಿದೆ.
ಕೇರಳದ ವಯನಾಡಿನ ಕಲ್ಪೆಟ್ಟಾದಲ್ಲಿ ಸೂರ್ಯಗ್ರಹಣ ಸಂಪೂರ್ಣ ವೈಭವೋಪೇತವಾಗಿ ಕಾಣಿಸಿಕೊಂಡಿದೆ. ಒರಿಸ್ಸಾ, ಮುಂಬೈ ಮತ್ತು ಚೆನ್ನೈನಂತಹ ಭಾರತದ ಹಲವಾರು ಭಾಗಗಳಲ್ಲಿ ಕಾಣಿಸಿಕೊಂಡಿದೆ.
ಕರ್ನಾಟಕದ ಮಂಗಳೂರು ಮತ್ತು ಮಡಿಕೇರಿ ಗ್ರಹಣ ಅತ್ಯಂತ ಸ್ಪಷ್ಟವಾಗಿ ಗೋಚರಿಸಿದೆ. ಸೂರ್ಯ ಬಳೆಯ ರೀತಿಯಲ್ಲಿ ಬೆಳಿಗ್ಗೆ 9.24ರಿಂದ 9.29ರವರೆಗೆ ಕಾಣಿಸಿಕೊಂಡಿದ್ದಾನೆ.
ಸೂರ್ಯ, ಭೂಮಿಯ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಗ್ರಹಣಗಳಲ್ಲಿ ಮೂರು ವಿಧವಿದೆ. ಅದು ಪೂರ್ಣ, ಪಾರ್ಶ್ವ, ಕಂಕಣ. ಕಂಕಣ ಗ್ರಹಣದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆ ಮಾಡುವುದಿಲ್ಲ. ಗ್ರಹಣವಾದಾಗ ಚಂದ್ರನ ಸೂತ್ತಲೂ ಬೆಳಕು ತೂರಿ ಬಂದು ಹೊಳೆಯುವ ಬಂಗಾರದ ಬಳೆಯಾಕಾರದಲ್ಲಿ ಸೂರ್ಯ ಗೋಚರಿಸುತ್ತಾನೆ. ಇದು ನೋಡಲು ಅಮೋಘವಾಗಿರುತ್ತದೆ.
ಈ ಅದ್ಭುತ ಖಗೋಳ ಕೌತುಕಕ್ಕೆ ಹಲವಾರು ಮಂದಿ ಸಾಕ್ಷಿಯಾಗಿದ್ದಾರೆ. ವಿಶೇಷವಾಗಿ ವಿನ್ಯಾಪಡಿಸಿದ ಗ್ಲಾಸುಗಳನ್ನು ಧರಿಸಿ ಹಲವರು ಸೂರ್ಯನನ್ನು ವೀಕ್ಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.