ನವದೆಹಲಿ: ದೆಹಲಿಯ ಜಾಮಿಯಾ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹಿಂಸಾತ್ಮಾಕ ಪ್ರತಿಭಟನೆಗಳು ಭುಗಿಲೆದ್ದ ಹಿಂದಿನ ಕಾರಣಗಳ ಬಗ್ಗೆ ಗುಪ್ತಚರ ಸಂಸ್ಥೆಗಳ ಸಹಾಯದಿಂದ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶಹೀನ್ ಬಾಗ್, ಓಖ್ಲಾ, ಜಾಮಿಯಾ ನಗರ, ಬಟ್ಲಾ ಹೌಸ್ ಸುತ್ತಮುತ್ತಲಿನಲ್ಲಿ ಇರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ)ಸ ಕಚೇರಿಯ ಮೇಲೆ ದೆಹಲಿ ಪೊಲೀಸರು ಅನುಮಾನಾಸ್ಪದವಾದ ನೋಟ ಬೀರಿದ್ದಾರೆ.
“ಶಹೀನ್ ಬಾಗ್ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡರೆ, ಪೌರತ್ವ ವಿರೋಧಿ ಪ್ರತಿಭಟನೆಯ ಹಿಂದೆಯೂ ಒಂದು ಕಾರಣವಿದೆ ಎಂದೆನಿಸುತ್ತದೆ, ಸರಿಯಾದ ಸಮಯದಲ್ಲಿ ಅದು ಬಹಿರಂಗಗೊಳ್ಳುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಾಮೀಯಾ ನಗರ ಮತ್ತು ಲಕ್ನೋದ ನಡ್ವಾದಲ್ಲಿನ ಪ್ರತಿಭಟನೆಗಳ ಹಿಂದೆ ಪಿಎಫ್ ಐಯನ್ನು ಹೆಸರಿಸಿದ ಮತ್ತು ಹಲವರನ್ನು ಬಂಧಿಸಿದ ನಂತರ ಅನೇಕ ಮಂದಿ ಕಾರ್ಯಕರ್ತರು ತಲೆಮರೆಸಿಕೊಂಡಿದ್ದಾರೆ ಎಂದಿದ್ದಾರೆ.
ಇವರ ವಿರುದ್ಧ ಕ್ರಮವನ್ನು ಜರುಗಿಸಲು ಸರ್ಕಾರವು ತನಿಖೆಯ ಅಂತಿಮ ವರದಿಗಾಗಿ ಕಾಯುತ್ತಿದೆ.
ದೆಹಲಿಯಲ್ಲಿ ಪ್ರತಿಭಟನೆಯನ್ನು ನಡೆಸಿದರೆ ಮಾಧ್ಯಮಗಳು ಹೆಚ್ಚು ಕೇಂದ್ರೀಕರಿಸುತ್ತವೆ, ಇದರಿಂದ ದೇಶದಾದ್ಯಂತ ಪ್ರತಿಭಟನೆಯನ್ನು ಉಲ್ಬಣಗೊಳಿಸಬಹುದು ಎಂಬುದು ಇವರುಗಳ ಯೋಜನೆಯಾಗಿತ್ತು ಎನ್ನಲಾಗಿದೆ.
ಗುಪ್ತಚರ ಮಾಹಿತಿಯ ಪ್ರಕಾರ, ಇತರ ರಾಜ್ಯಗಳಿಂದ ಬಂದ ಸುಮಾರು 150 ಯುವ ಪಿಎಫ್ಐ ಕಾರ್ಯಕರ್ತರು ರಾಷ್ಟ್ರ ರಾಜಧಾನಿಗೆ ಪ್ರವೇಶಿಸಿ ಹಿಂಸಾಚಾರ ಭುಗಿಲೆಳುವಂತೆ ಮಾಡಿದ್ದರು. ಪ್ರತಿಭಟನೆಯ ಎರಡು ದಿನಗಳ ಮೊದಲು ಡಿಸೆಂಬರ್ 13 ರಿಂದಲೇ ಜಾಮಿಯಾ ನಗರ ಪ್ರದೇಶದಲ್ಲಿ ಇವರು ತಲೆಮರೆಸಿಕೊಂಡಿದ್ದರು. ಬಳಿಕ ಕಲ್ಲು ತೂರಲು ಪ್ರಾರಂಭಿಸಿದ್ದಾರೆ, ಬಸ್ಸುಗಳನ್ನು ಬೆಂಕಿಯಿಟ್ಟು ಸುಡಲು ಆರಂಭಿಸಿದ್ದಾರೆ.
ಗುಪ್ತಚರ ಸಂಸ್ಥೆ ಅಧಿಕಾರಿಯ ಪ್ರಕಾರ, ಇವರ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಮತ್ತು ಸರಿಯಾದ ಸಮಯದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.