ನವದೆಹಲಿ: ಪ್ರತಿವರ್ಷ ಡಿಸೆಂಬರ್ 24 ಅನ್ನು ರಾಷ್ಟ್ರೀಯ ಗ್ರಾಹಕ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಗ್ರಾಹಕ ವ್ಯವಹಾರಗಳ ಕುರಿತು ಗ್ರಾಹಕರಿಗೆ ಮಾಹಿತಿಯನ್ನು ನೀಡುವುದು, ಆ ಮೂಲಕ ಮಾರಾಟಗಾರರಿಂದ, ಸೇವಾ ಪೂರೈಕೆದಾರರಿಂದ ವಂಚನೆಗೆ ಒಳಗಾಗದಂತೆ ಮಾಡುವುದು ಈ ದಿನದ ಉದ್ದೇಶವಾಗಿದೆ.
ಗ್ರಾಹಕ ವ್ಯವಹಾರಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆನ್ಲೈನ್ ಮಾರಾಟಗಳು ಹೆಚ್ಚು ಹೆಚ್ಚು ಮುನ್ನಲೆಗೆ ಬರುತ್ತಿರುವ ಈ ಸಂದರ್ಭದಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ, ಗ್ರಾಹಕ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಅವಶ್ಯಕ.
ಬಣ್ಣ ಬಣ್ಣದ ಜಾಹೀರಾತುಗಳು, ಮಾರಾಟಗಾರರ ಬಣ್ಣದ ಮಾತಿಗೆ ಮರುಳಾಗಿ ಗ್ರಾಹಕ ತಾನು ಖರೀದಿಸಿದ ವಸ್ತುಗಳಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು. ಇಂಥ ಸಂದರ್ಭದಲ್ಲಿ ಗ್ರಾಹಕ ಹಕ್ಕುಗಳು ಆತನ ನೆರವಿಗೆ ಬರುತ್ತವೆ. ಸೂಕ್ತವಾದ ದಾಖಲೆಗಳಿದ್ದರೆ ಖಂಡಿತವಾಗಿಯೂ ನ್ಯಾಯ ಗ್ರಾಹಕನ ಪರವಾಗಿಯೇ ಇರುತ್ತದೆ. ಆದರೆ ಎಷ್ಟೋ ಜನರಿಗೆ ಗ್ರಾಹಕ ಹಕ್ಕುಗಳ ಬಗ್ಗೆ ಮಾಹಿತಿ ಇಲ್ಲ ಎಂಬುದು ದುರಾದೃಷ್ಟಕರ.
ಗ್ರಾಹಕರಿಗೆ ಸುರಕ್ಷತೆಯ ಹಕ್ಕು, ಮಾಹಿತಿಯ ಹಕ್ಕು, ಆಯ್ಕೆಯ ಹಕ್ಕು, ಕೇಳುವ ಹಕ್ಕು, ಪರಿಹಾರ ಕೇಳುವ ಹಕ್ಕು, ಗ್ರಾಹಕ ಶಿಕ್ಷಣದ ಹಕ್ಕುಗಳು ಇರುತ್ತವೆ . ಗ್ರಾಹಕರ ವ್ಯಾಜ್ಯಗಳನ್ನು ನಿರ್ವಹಿಸುವುದಕ್ಕಾಗಿಯೇ ಸರಕಾರ ಗ್ರಾಹಕ ನ್ಯಾಯಾಲಯಗಳನ್ನ ಸ್ಥಾಪಿಸಿದೆ. ಈ ನ್ಯಾಯಾಲಯ ಮುಖ್ಯ ಗುರಿಯೇ ಗ್ರಾಹಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಮಾರಾಟಗಾರರು ಗ್ರಾಹಕರಿಗೆ ನ್ಯಾಯಬದ್ಧ ಸೇವೆ ಒದಗಿಸುವುದನ್ನು ಖಚಿತಪಡಿಸುವುದು. ಒಂದು ವೇಳೆ ಗ್ರಾಹಕರು, ಮಾರಾಟಗಾರರಿಂದ ಶೋಷಣೆಗೊಳಗಾದರೆ, ಪೀಡನೆಗೊಳಗಾದರೆ ಪ್ರಕರಣಗಳನ್ನು ದಾಖಲಿಸಬಹುದಾಗಿದೆ. ಒಂದು ವೇಳೆ, ಶೋಷಣೆಯ ಬಗ್ಗೆ ಖಚಿತವಾದ ಸಾಕ್ಷ್ಯಗಳಿದ್ದರೆ ಕೋರ್ಟ್ ಗ್ರಾಹಕರ ಪರವಾಗಿಯೇ ನ್ಯಾಯವನ್ನು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.