ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗುರುವಾರ ಗಂಗಾ ಬ್ಯಾರೇಜ್ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಮಾಮಿ ಗಂಗಾ ಯೋಜನೆಯಿಂದಾಗಿ ಗಂಗಾ ನದಿ ಇಂದು ಹಿಂದೆಂದಿಗಿಂತಲೂ ಹೆಚ್ಚು ಶುದ್ಧವಾಗಿದೆ ಎಂದಿದ್ದಾರೆ.
“ನಮಾಮಿ ಗಂಗಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದರು ಮತ್ತು ಅದಕ್ಕೆ ಹೆಚ್ಚಿನ ವೇಗವನ್ನು ನೀಡಿದರು. ಗಂಗಾ ನದಿ ಭಾರತೀಯರಿಗೆ ತಾಯಿಗೆ ಸಮಾನವಾಗಿದೆ. ಈ ಅಭಿಯಾನವನ್ನು ಆರಂಭಿಸಿದ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಅವರ ಕಾರ್ಯಕ್ರಮದ ಫಲವಾಗಿ ಇಂದು ಗಂಗಾನದಿ ಹಿಂದೆಂದಿಗಿಂತಲೂ ಹೆಚ್ಚು ಶುದ್ಧವಾಗಿದೆ. ನದಿಯ ವಲಯದಲ್ಲಿ ಈಗ ಮೀನುಗಳು ಕಾಣಲಾರಂಭಿಸಿದೆ” ಎಂದಿದ್ದಾರೆ.
ಗಂಗಾನದಿಯನ್ನು ಮಲಿನಗೊಳಿಸುತ್ತಿದ್ದ ಕೊಳಚೆ ಗುಂಡಿಗಳ ಮತ್ತು ತ್ಯಾಜ್ಯ ಹರಿಯುವಿಕೆ ಕೊಳವೆಗಳ ಮುಚ್ಚುವಿಕೆ ಯಿಂದಾಗಿ ನದಿಯ ಸ್ಥಿತಿಯಲ್ಲಿ ಗಣನೀಯ ಬದಲಾವಣೆ ಕಂಡುಬರುತ್ತಿದೆ ಎಂದಿದ್ದಾರೆ.
“ಇಂದು ನಾವು ಸಿಸಮೌ ಸೇವರ್ ಸಮೀಪ ನಿಂತಿದ್ದೇವೆ, ಒಂದು ಕಾಲದಲ್ಲಿ ಇದು ಅತಿ ದೊಡ್ಡ ತ್ಯಾಜ್ಯ ಹರಿಯುವ ಕೊಳವೆ ಯಾಗಿತ್ತು. ಕಾನ್ಪುರದ ಎಲ್ಲಾ ತ್ಯಾಜ್ಯಗಳು ಇದರ ಮೂಲಕ ಗಂಗಾನದಿಗೆ ಸೇರುತ್ತಿತ್ತು. ಇದರಿಂದ ಇಡೀ ನದಿಯೇ ಕಪ್ಪು ಬಣ್ಣಕ್ಕೆ ತಿರುಗುತ್ತಿತ್ತು ಆದರೆ ಇಂದು ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ” ಎಂದಿದ್ದಾರೆ.
12ಕ್ಕೂ ಅಧಿಕ ಕೊಳಚೆ ಘಟಕಗಳನ್ನು ಈಗಾಗಲೇ ಮುಚ್ಚಲಾಗಿದೆ. ಇದರಿಂದ ಗಂಗಾ ನದಿಗೆ ತ್ಯಾಜ್ಯ ಹರಿಯುವುದು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.