ನವದೆಹಲಿ: ಅಮೃತಸರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸ್ಮಾರಕವನ್ನು ನಿರ್ವಹಿಸುವ ಟ್ರಸ್ಟ್ಗೆ ಕಾಂಗ್ರೆಸ್ ಅಧ್ಯಕ್ಷರನ್ನು ಖಾಯಂ ಸದಸ್ಯರನ್ನಾಗಿ ಮಾಡುವ ‘ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಕಾಯ್ದೆ’ಯ ನಿಬಂಧನೆಯನ್ನು ರದ್ದುಗೊಳಿಸುವ ಮಸೂದೆಯನ್ನು ಮಂಗಳವಾರ ರಾಜ್ಯಸಭೆಯಲ್ಲಿ ಧ್ವನಿ ಮತದಿಂದ ಅಂಗೀಕರಿಸಲಾಯಿತು.
ನಕಾರಾತ್ಮಕವಾಗಿ ಮತ ಚಲಾಯಿಸಿದ ಸಂಸದ ಜೈರಾಮ್ ರಮೇಶ್ ಅವರನ್ನು ಹೊರತುಪಡಿಸಿ, ಮತದಾನದ ಸಮಯದಲ್ಲಿ ಸಂಸತ್ತಿನ ಕಾಂಗ್ರೆಸ್ ಸದಸ್ಯರು ಮೌನವಾಗಿದ್ದರು.
ಈಗಾಗಲೇ ಈ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿದೆ. ಈ ತಿದ್ದುಪಡಿ ಮಸೂದೆಯು, ಪ್ರತಿಪಕ್ಷದ ನಾಯಕ ಅಥವಾ ಏಕೈಕ ಅತಿದೊಡ್ಡ ಪಕ್ಷದ ನಾಯಕನನ್ನು ಟ್ರಸ್ಟ್ನ ಖಾಯಂ ಸದಸ್ಯರನನ್ನಾಗಿ ಮಾಡುತ್ತದೆ.
“ಮಸೂದೆಯು ಕಾಂಗ್ರೆಸ್ ಅಧ್ಯಕ್ಷರನ್ನು ಟ್ರಸ್ಟ್ನ ಖಾಯಂ ಸದಸ್ಯರಾಗಿ ಮಾಡುವ ನಿಬಂಧನೆಯನ್ನು ತೆಗೆದುಹಾಕುವ ಮೂಲಕ ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕವನ್ನು ನಡೆಸುವ ಟ್ರಸ್ಟ್ ಅನ್ನು ರಾಜಕೀಯ ಮುಕ್ತ ಮಾಡಲು ಪ್ರಯತ್ನಿಸುತ್ತದೆ” ಎಂದು ಸಂಸ್ಕೃತಿ ಸಚಿವಾಲಯವು ಮಸೂದೆ ಅಂಗೀಕಾರದ ನಂತರ ಹೇಳಿಕೆಯಲ್ಲಿ ತಿಳಿಸಿದೆ.
ಮಸೂದೆಯ ಕುರಿತ ಚರ್ಚೆಗೆ ಉತ್ತರಿಸಿದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು, ಈ ಹಿಂದೆ ಟ್ರಸ್ಟ್ ಹೊಂದಿದ್ದ ರಾಜಕೀಯ ಬಣ್ಣವನ್ನು ಈ ಮಸೂದೆ ಕೊನೆಗೊಳಿಸಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.