ಮಧುರೈ: ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ದೇವಸ್ಥಾನದಲ್ಲಿ ಒಟ್ಟು 108 ಮಹಿಳಾ ವೀಣಾ ವಾದಕರು ಒಟ್ಟಾಗಿ ವೀಣೆಯನ್ನು ನುಡಿಸುವ ಮೂಲಕ ಮನಸೂರೆಗೊಂಡರು. ವಿಜಯದಶಮಿ ಸಂದರ್ಭದಲ್ಲಿ ಈ ವೀಣಾ ವಾದನ ಕಾರ್ಯಕ್ರಮ ಜರುಗಿದೆ.
ದೇವಾಲಯದ ಆವರಣದಲ್ಲಿರುವ ತಿರುಕ್ಕಲ್ಯಾಣ ಮಂಟಪದಲ್ಲಿ ಮಂಗಳವಾರ ವೀಣಾ ವಾದನ ಶಿಕ್ಷಕಿ ಶೋಭನ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
“ವರುಣ ದೇವರನ್ನು ಒಲಿಸಿಕೊಳ್ಳುವ ಸಲುವಾಗಿ ಮತ್ತು ವಿಜಯದಶಮಿಯ ಶುಭ ಸಂದರ್ಭದಲ್ಲಿ ಜ್ಞಾನ ಮತ್ತು ಅರಿವನ್ನು ಹರಡಲು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ನಾನು ಸಿಂಗಾಪುರದಿಂದ ಬಂದಿದ್ದೇನೆ. ಈ ದೇವಾಲಯವು ನಿಜವಾಗಿಯೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದುದು, ಹಾಗಾಗಿ ನಾನು ಇಲ್ಲಿಗೆ ನಿರಂತರವಾಗಿ ಬರುತ್ತಿರುತ್ತೇನೆ” ಎಂದು ಪ್ರವಾಸಿ ವಿವೇಕ್ ಹೇಳುತ್ತಾರೆ.
ಸಂಗೀತ ಮತ್ತು ದೇವರನ್ನು ಆರಾಧಿಸುವ ಭಾಗವಾಗಿ ಈ ಕಾರ್ಯಕ್ರಮವನ್ನು ಕಳೆದ 20 ವರ್ಷಗಳಿಂದ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದಲ್ಲಿ ನಡೆಸಲಾಗುತ್ತಿದೆ.
“ಇದು ನಮಗೆ ನಿಜವಾಗಿಯೂ ವಿಶೇಷ ಕಾರ್ಯಕ್ರಮವಾಗಿದೆ. ನಾವು ಸ್ಪೇನ್ನಿಂದ ಬಂದಿದ್ದೇವೆ. ಈ ಕಾರ್ಯಕ್ರಮಕ್ಕೆದಲ್ಲಿ ಭಾಗಿಯಾಗಲು ನಾವು ತುಂಬಾ ಸಂತೋಷಪಡುತ್ತೇವೆ. ಇದು ಒಂದು ಅದ್ಭುತ ಸನ್ನಿವೇಶವಾಗಿದೆ. ಈ ಮಹಿಳೆಯರು ವೀಣೆ ವಾದನ ಮಾಡುವುದನ್ನು ಕೇಳುವುದು ಒಂದು ದೊಡ್ಡ ಅನುಭವ. ಭಾರತೀಯ ಸಂಸ್ಕೃತಿಯನ್ನು ಎಲ್ಲೆಡೆಯೂ ಪಾಲಿಸಲಾಗುತ್ತಿದೆ, ಇಲ್ಲಿನ ಸಂಸ್ಕೃತಿಯನ್ನು ಅನುಭವಿಸಲು ಜಗತ್ತಿನಾದ್ಯಂತದಿಂದ ಜನರು ಭಾರತಕ್ಕೆ ಭೇಟಿ ನೀಡಬೇಕು ”ಎಂದು ವೆರೋನಿಕಾ ಹೇಳುತ್ತಾರೆ.
20 ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ವೀಣಾ ವಾದಕರ ಅದ್ಭುತ ಪ್ರದರ್ಶನವನ್ನು ಕಣ್ತುಂಬಿಕೊಂಡರು.
22 ಹಾಡುಗಳನ್ನು ವೀಣಾ ವಾದಕರು ಮತ್ತು ಅಪಾರ ಸಂಖ್ಯೆಯ ಭಕ್ತರು ನುಡಿಸಿದರು, ವಿದ್ಯಾರ್ಥಿಗಳು ಮತ್ತು ಸಂಗೀತ ಉತ್ಸಾಹಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.