ನವದೆಹಲಿ: ದೇವ ಭಾಷೆ ಸಂಸ್ಕೃತವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ಕರ್ನಾಟಕದ ಸುಂದರವಾದ ತೀರ್ಥಹಳ್ಳಿಯ ಚಿಟ್ಟೇಬೈಲ್ “ಸಂಸ್ಕೃತ ಗ್ರಾಮ”ವಾಗಿ ಅಭಿವೃದ್ಧಿಯಾಗಲಿದೆ.
ಸಂಸ್ಕೃತದ ಪುನರುಜ್ಜೀವನಕ್ಕಾಗಿ, ಕೇಂದ್ರವು ರಾಷ್ಟ್ರೀಯ ಸಂಸ್ಕೃತ ಸಂಸ್ಕೃತ (ಆರ್ಎಸ್ಕೆಎಸ್), ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ವಿದ್ಯಾಪೀಠ (ಎಸ್ಎಲ್ಬಿಎಸ್ಆರ್ಎಸ್ವಿ) ಮತ್ತು ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ (ಆರ್ಎಸ್ವಿ)ಗಳಿಗೆ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸೂಚನೆ ನೀಡಿದೆ.
ಚಿಟ್ಟೇಬೈಲ್ಗಿಂತಲೂ ಮುಂಚಿತವಾಗಿ, ದಿನನಿತ್ಯದ ಸಂಭಾಷಣೆಯಲ್ಲಿ ಸಂಸ್ಕೃತವನ್ನು ಬಳಸುವ ದೇಶದ ಮೊದಲ ಹಳ್ಳಿ ಎಂಬ ಹೆಗ್ಗಳಿಕೆಗೆ ಶಿವಮೊಗ್ಗದ ಮತ್ತೂರು ಪಾತ್ರವಾಗಿತ್ತು.
ಚಿಟ್ಟೇಬೈಲ್ ಹೊರತುಪಡಿಸಿ, ತ್ರಿಪುರದ ಜುಬ್ತಾರಾ, ಹಿಮಾಚಲ ಪ್ರದೇಶದ ಮಸೊಟ್, ಕೇರಳದ ಅದತ್ ಮತ್ತು ಮಧ್ಯಪ್ರದೇಶದ ಬಾರೈ ಎಂಬ ನಾಲ್ಕು ಗ್ರಾಮಗಳು ಕೇಂದ್ರದ ಉನ್ನತ್ ಭಾರತ್ ಅಭಿಯಾನದ ಅಡಿಯಲ್ಲಿ ಆಯ್ಕೆಯಾಗಿವೆ.
ಕೇರಳ ಸಂಸದ ಅಡೂರ್ ಪ್ರಕಾಶ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು, ನವದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನವು ಚಿಟ್ಟೇಬೈಲ್ ಅನ್ನು ದತ್ತು ಪಡೆದುಕೊಂಡಿದ್ದು ಮತ್ತು ಎಲ್ಲಾ ಗ್ರಾಮಸ್ಥರಿಗೆ ಸಂಸ್ಕೃತದಲ್ಲಿ ಸಂವಾದ ನಡೆಸಲು ಸಹಾಯ ಮಾಡಲು ತರಗತಿಗಳನ್ನು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.