ನವದೆಹಲಿ: ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಸುವುದಿಲ್ಲವೇಕೆ? ಎನ್ನುವ ಬದಲು ಭಾರತ ಒಂದು ಜವಾಬ್ದಾರಿಯುತ ಪರಮಾಣು ಶಕ್ತಿ ರಾಷ್ಟ್ರವಾಗಿದೆ ಎಂದು ಹೇಳಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಪರಮಾಣು ವಿಷಯದ ಮೇಲೆ ನಿಲುವು ತೆಗೆದುಕೊಂಡಲ್ಲಿ, ನೀವು ನಿಮ್ಮ ಎಲ್ಲ ಸಾಮರ್ಥ್ಯವನ್ನು ಪರಮಾಣು ಶಕ್ತಿಗೆ ಬಳಸಿದಂತೆ. ಭಾರತ ಪರಮಾಣು ಪರಿಕಲ್ಪನೆಯನ್ನು ಪ್ರಥಮವಾಗಿ ಬಳಸಿಲ್ಲ ಎಂದು ಜನರು ಹೇಳುತ್ತಾರೆ. ಆದರೆ ಭಾರತ ಒಂದು ಜವಾಬ್ದಾರಿಯುತ ಪರಮಾಣು ಶಕ್ತಿ ಬಳಕೆದಾರ. ಅದನ್ನು ಭಾರತ ಬೇಜವಾಬ್ದಾರಿಯುತವಾಗಿ ಬಳಸುವುದಿಲ್ಲ ಎಂದು ಅವರು ಹೇಳಿದ್ದಾರೆ.
1998ರಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಿದ ಬಳಿಕ ಪರಮಾಣು ಶಕ್ತಿಯನ್ನು ಮೊದಲು ಬಳಸದೇ ಇರಲು ವಚನಬದ್ಧವಾಗಿದೆ ಎಂದು ಹೇಳಿತ್ತು.
ನಾವು ಬೆದರಿಕೆ ಒಡ್ಡಿದಲ್ಲಿ ಪರಮಾಣು ಶಸ್ತ್ರಾಸ್ತ್ರ ಬಳಸುವುದಾಗಿ ನೆರೆ ರಾಷ್ಟ್ರ ಬೆದರಿಕೆ ಹಾಕಿತ್ತು. ಆದರೆ ನಾವು ಸರ್ಜಿಕಲ್ ಸ್ಟೈಕ್ ನಡೆಸಿದ ಬಳಿಕವೂ ಯಾವುದೇ ಬೆದರಿಕೆ ಸಂಭವಿಸಿಲ್ಲ.
‘ಅನಿರೀಕ್ಷಿತತೆ’ ಈ ತಂತ್ರದ ಭಾಗವಾಗಿದೆ ಎಂದು ಪರಿಕ್ಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.