ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತವನ್ನು ತೊರೆದ ಎರಡು ದಶಕಗಳ ಬಳಿಕ ಇದೀಗ ಆತನ ಫೋಟೋ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ.
ತಲೆಮರೆಸಿಕೊಂಡಿರುವ ದಾವೂದ್ ಬಿಳಿ ಕುರ್ತಾ, ಅದರ ಮೇಲೆ ಕಪ್ಪು ಕೋಟು ಹಾಕಿಕೊಂಡು ಕುಳಿತುಕೊಂಡಿರುವ ಫೋಟೋವೊಂದನ್ನು ಕೆಲ ವರ್ಷಗಳ ಹಿಂದೆ ಭಾರತೀಯ ಪತ್ರಕರ್ತರೊಬ್ಬರು ಕ್ಲಿಕ್ಕಿಸಿದ್ದಾರೆ. ದಾವೂದ್ ತಲೆಮರೆಸಿಕೊಂಡ ಬಳಿಕ ಸಿಕ್ಕ ಮೊದಲ ಫೋಟೋ ಇದಾಗಿದೆ. ಇದರಲ್ಲಿ ಆತ ಕ್ಲೀನ್ ಶೇವ್ ಮಾಡಿಕೊಂಡಿದ್ದಾನೆ.
ಇದುವರೆಗೆ ಆತನ 20 ವರ್ಷಗಳ ಹಿಂದಿನ ಹಳೆಯ ಫೋಟೋಗಳೇ ಪ್ರಕಟವಾಗುತ್ತಿದ್ದವು, ಇದೀಗ ಆತ ಸಂಪೂರ್ಣ ಬದಲಾಗಿದ್ದಾನೆ.
ಮಾಧ್ಯಮ ವರದಿಯ ಪ್ರಕಾರ ಪತ್ರಕರ್ತ ವಿವೇಕ್ ಅಗರ್ವಾಲ್ ಅವರು ಈ ಫೋಟೋವನ್ನು ಪಾಕಿಸ್ಥಾನದಲ್ಲಿ ಕ್ಲಿಕ್ಕಿಸಿದ್ದಾರೆ. ಅವರು ಮುಂಬರುವ ಕಾದಂಬರಿಯ ಕವರ್ ಪೇಜ್ನಲ್ಲೂ ಈ ಫೋಟೋ ಇರಲಿದೆ.
ದಾವೂದ್ ಪ್ಲಾಸ್ಟಿಕ್ ಸರ್ಜರಿ ಮಾಡಿ ತನ್ನ ಮುಖವನ್ನು ಬದಲಾಯಿಸಿಕೊಂಡಿದ್ದಾನೆ ಎಂಬ ವದಂತಿಗಳು ಕೇಳಿ ಬಂದಿದ್ದವು, ಆದರೆ ಈ ಫೋಟೋ ಅದನ್ನು ಸುಳ್ಳೆಂದು ಸಾಬೀತು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.