ಮಂಗಳೂರು : ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ಮಹೋನ್ನತ ನೇತಾರರ ಜೀವನ ಶೈಲಿ, ಹೋರಾಟದ ಬದುಕು ಎಲ್ಲಾ ಕಾಲಕ್ಕೂ ಎಲ್ಲಾ ಜನರಿಗೂ ಅನುಸರಣೆಗೆ ಯೋಗ್ಯವಾದುದು. ಅವರ ಬದುಕಿನ ರೀತಿಯೇ ಒಂದು ಭವ್ಯವಾದ ಸಂದೇಶ. ಯುವಜನತೆ ಅವರನ್ನು ತಮ್ಮ ಬದುಕಿನ ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಿ ಅವರು ತೋರಿದ ದಾರಿಯಲ್ಲಿ ಮುಂದುವರೆದು ಅವರ ಕನಸಿನ ಭಾರತದ ಸತ್ಪ್ರಜೆಗಳಾಗಬೇಕು’ ಎಂದು ವಿಕಾಸ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಶ್ರೀ. ಕೃಷ್ಣ. ಜೆ. ಪಾಲೆಮಾರ್ ಹೇಳಿದರು. ಅವರು ಕಾಲೇಜಿನ ಆವರಣದಲ್ಲಿ ಗಾಂಧೀಜಿಯವರ 146 ನೇ ಹಾಗೂ ಶಾಸ್ತ್ರೀಜಿಯವರ 111 ನೇಯ ಜನ್ಮದಿನದಂದು ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜನ್ಮ ದಿನಾಚರಣೆಯನ್ನು ವಿನೂತನ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ಗಾಂಧೀಜಿಯವರ ರೇಖಾಚಿತ್ರ ಬಿಡಿಸುವಿಕೆ ಹಾಗೂ ಶಾಸ್ತ್ರೀಜಿಯವರ ಕುರಿತಾದ ರಸಪ್ರಶ್ನೆ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಿ ವಿಜೇತರಿಗೆ ಖಾದಿ ಉಡುಪುಗಳನ್ನು ಬಹುಮಾನವಾಗಿ ನೀಡಲಾಯಿತು. ಅಲ್ಲದೆ ನಾಯಕ ದ್ವಯರ ಜೀವನ ಕಥನ ಹಾಗೂ ಅವರು ಪಾಲಿಸಿಕೊಂಡು ಬಂದ ಜೀವನ ಮೌಲ್ಯಗಳ ಕುರಿತು ಅನುಕ್ರಮವಾಗಿ ಪ್ರಾಂಶುಪಾಲರಾದ ಡಾ.ಕೆ.ರಾಜೇಂದ್ರ ಮತ್ತು ಉಪಪ್ರಾಂಶುಪಾಲರಾದ ಶ್ರೀ. ನವೀನ್ ಎಸ್.ಎ ವಿದ್ಯಾರ್ಥಿಗಳಿಗೆ ಬೋಧಿಸಿದರು.
ವಿಕಾಸ್ ಕಾಲೇಜಿನಲ್ಲಿ ಪ್ರತಿ ತಿಂಗಳು ‘ಸ್ವಚ್ಛ ತರಗತಿ ನಿರ್ವಹಣೆ’ ಹಾಗೂ ‘ವಿದ್ಯಾರ್ಥಿ ನಿಲಯ ಕೊಠಡಿ ನಿರ್ವಹಣೆಗಾಗಿ’ ಕೊಡುವ ಸ್ವಚ್ಛ ವಿಕಾಸ್ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಕಾಲೇಜಿನ ಸಲಹೆಗಾರರಾದ ಶ್ರೀ. ಅನಂತ್ ಪ್ರಭು, ಟ್ರಸ್ಟಿಗಳಾದ ಶ್ರೀ. ಜೆ. ಕೊರಗಪ್ಪ, ಶ್ರೀ. ಸೂರಜ್ ಕುಮಾರ್ ಕಲ್ಯ, ಆಡಳಿತಗಾರರಾದ ಶ್ರೀ. ಕಾಲಿನ್ ಡಿ’ಸೋಜಾ, ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಶ್ರೀ.ಜಿನೋ.ಕೆ.ಜಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪನಮನ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.