ಬೆಂಗಳೂರು: ಇತ್ತೀಚಿಗೆ ಭೇದಿಸಲಾದ ಬೆಂಗಳೂರು ಇಸಿಸ್ ಟೆರರ್ ಮಾಡ್ಯೂಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರ ಬಂಧನವಾಗಿದೆ. ಇಸಿಸ್ ಜೊತೆ ಸಂಪರ್ಕವನ್ನು ಹೊಂದಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ ಎಂದು ಎನ್ಐಎ ಇಂದು ಮಾಹಿತಿ ನೀಡಿದೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸೀರ್ ಎಂದು ಗುರುತಿಸಲಾಗಿದೆ.
ಈ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಭಯೋತ್ಪಾದಕ ಸಂಘಟನೆಗಳ ಸಂಪರ್ಕ ಹೊಂದಿದ್ದ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಿತ್ತು. ಈತನ ವಿಚಾರಣೆಯ ಸಂದರ್ಭದಲ್ಲಿ ನಿನ್ನೆ ಬಂಧಿತರಾದ ಇಬ್ಬರು ಆರೋಪಿಗಳ ಹೆಸರು ಕೇಳಿಬಂದಿದೆ ಎಂದು ಹೇಳಲಾಗಿದೆ.
ಬಂಧಿತರಾದ ಈ ಮೂರು ಭಯೋತ್ಪಾದಕ ಶಂಕಿತರು ಹಿಜ್ಬ್ ಉತ್ ತೆಹ್ರಿರ್ ಎಂಬ ಸಂಘಟನೆಯ ಸದಸ್ಯರ ಸಂಪರ್ಕವನ್ನು ಹೊಂದಿದ್ದರು ಮತ್ತು ‘ಖುರಾನ್ ಸರ್ಕಲ್’ ಎಂಬ ಗುಂಪನ್ನು ಕಟ್ಟಿಕೊಂಡಿದ್ದರು. ಇದರ ಮೂಲಕ ಬೆಂಗಳೂರಿನ ಯುವಕರನ್ನು ಉಗ್ರವಾದದ ಸೆಳೆಯುತ್ತಿದ್ದರು. ಅಲ್ಲದೆ ಸಿರಿಯಾಗೆ ತೆರಳಿ ಅಲ್ಲಿ ಇಸಿಸ್ಗಾಗಿ ಹೋರಾಟ ನಡೆಸಲು ಯುವಕರಿಗೆ ನೆರವು ನೀಡುತ್ತಿದ್ದರು ಎಂದು ಹೇಳಲಾಗಿದೆ.
ಬಂಧಿತರನ್ನು ಈಗಾಗಲೇ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಲಾಗಿದೆ, ಅವರಿಗೆ ಹತ್ತು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
NIA Arrests Two Accused in ISIS Case of Bengaluru pic.twitter.com/Q2KdjWIlv7
— NIA India (@NIA_India) October 8, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.