ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಒಂದು ಪ್ರಮುಖ ಸಮರಾಭ್ಯಾಸವನ್ನು ಪ್ರಾರಂಭಿಸಲು ಸಜ್ಜಾಗಿದೆ, ತನ್ನ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರೀಕ್ಷಿಸುವ ಮತ್ತು ಹೊಸ ತಂತ್ರಗಳನ್ನು ಪ್ರಯತ್ನಿಸುವ ಭಾಗವಾಗಿ ಇದನ್ನು ಆಯೋಜನೆಗೊಳಿಸಲಾಗಿದೆ. ಈ ಸಮರಾಭ್ಯಾಸವು ಮುಂಬಯಿ ಮೂಲದ ವೆಸ್ಟರ್ನ್ ನೇವಲ್ ಕಮಾಂಡ್ನ ಆಸ್ತಿಗಳನ್ನು ಪರೀಕ್ಷಿಸಲು ನೌಕಾಪಡೆಗೆ ಅವಕಾಶ ನೀಡುತ್ತದೆ ಎಂದು ನೌಕಾಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
“ಮಳೆ ಕಡಿಮೆಯಾಗಿರುವುದರಿಂದ ಮತ್ತು ಸಮುದ್ರದ ಸ್ಥಿತಿ ಸುಧಾರಣೆಗೊಂಡಿರುವುದರಿಂದ ನಮ್ಮ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರೀಕ್ಷಿಸಲು, ಕಾರ್ಯವಿಧಾನಗಳನ್ನು ಮೌಲ್ಯೀಕರಿಸಲು ಮತ್ತು ನೌಕಾ ಕಾರ್ಯಾಚರಣೆಯ ಹೊಸ ತಂತ್ರಗಳು ಮತ್ತು ಪರಿಕಲ್ಪನೆಗಳನ್ನು ಪ್ರಯತ್ನಿಸಲು ಇದು ಸರಿಯಾದ ಸಮಯ” ಎಂದು ಅವರು ಹೇಳಿದ್ದಾರೆ.
ಈ ಸಮರಾಭ್ಯಾಸವು ಭಾರತದ ಕಡಲ ನೌಕಾಪಡೆಯ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಮತ್ತು ಕಾರ್ಯಾಚರಣೆಯ ಕೌಶಲ್ಯಗಳನ್ನು ಸುಧಾರಿಸುವ ಸಲುವಾಗಿ ಸಮರಭ್ಯಾಸದ ಭಾಗವಾಗಿ ಲೈವ್-ಫೈರಿಂಗ್ ಡ್ರಿಲ್ಗಳು, ಹಡಗುಗಳ ಮೂಲಕ ಹೆಲಿಕಾಪ್ಟರ್ ಕಾರ್ಯಾಚರಣೆಗಳು, ಕಾರ್ಯಾಚರಣೆಯ ಲಾಜಿಸ್ಟಿಕ್ಸ್ ಮತ್ತು ಸಂವಹನ ಗುಣಮಟ್ಟದ ಕಾರ್ಯಾಚರಣಾ ಕಾರ್ಯವಿಧಾನಗಳು (ಎಸ್ಒಪಿ), ತರಬೇತಿ ಪರಿಣಾಮಕಾರಿತ್ವದ ಪರೀಕ್ಷೆಗಳು ಜರುಗಲಿವೆ. ನೌಕಾಪಡೆಯ ವಕ್ತಾರ ಪ್ರಕಾರ, “ಸಮುದ್ರದಲ್ಲಿನ ಸುಧಾರಿತ ಪರಿಸ್ಥಿತಿಗಳ ಲಾಭವನ್ನು ಪಡೆದುಕೊಳ್ಳುವ ಸಲುವಾಗಿ ಮಳೆಗಾಲದ ನಂತರ ನೌಕಾಪಡೆಯು ವ್ಯಾಸಮರಾಭ್ಯಾಸ ಮತ್ತು ನಿಯೋಜನೆಗಾಗಿ ಸಜ್ಜಾಗುವುದು ವಾಡಿಕೆ. ನಮ್ಮ ನಿಯೋಜನೆ ಪರಿಕಲ್ಪನೆಗಳನ್ನು, ಪರೀಕ್ಷಾ ಸಂವಹನ ಯೋಜನೆಗಳನ್ನು, ಸಮುದ್ರದಲ್ಲಿ ಆಕಸ್ಮಿಕಗಳನ್ನು ಕಲಿಯಲು ಮತ್ತು ಉತ್ತಮ ಕಡಲ ಡೊಮೇನ್ ಜಾಗೃತಿಯತ್ತ ನಮ್ಮ ಒಳಹರಿವುಗಳನ್ನು ಮೌಲ್ಯೀಕರಿಸಲು ಇದು ಸೂಕ್ತ ಸಮಯ.”
ಈ ಸಮರಾಭ್ಯಾಸವು ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಪ್ರಾಬಲ್ಯವನ್ನು ಬಲವಾಗಿ ಪ್ರತಿಪಾದಿಸಲಿದೆ. ಭಾರತೀಯ ನೌಕಾಪಡೆಯು ಈಗಾಗಲೇ ಅಡೆನ್ ಕೊಲ್ಲಿಯಲ್ಲಿ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯನ್ನು ನೀಡುವ ಮೂಲಕ ಈ ಪ್ರದೇಶದಲ್ಲಿ ಪ್ರಮುಖ ಉಪಸ್ಥಿತಿಯನ್ನು ಹೊಂದಿದೆ. ಇದಲ್ಲದೆ, ಭಾರತೀಯ ನೌಕಾಪಡೆಯು ಒಮನ್ ಕೊಲ್ಲಿಯ ಆಪರೇಷನ್ ಸಂಕಲ್ಪದ ಒಂದು ಭಾಗವಾಗಿದೆ. ಬಾಲಕೋಟ್ ವೈಮಾನಿಕ ದಾಳಿಯ ನಂತರ ಬೃಹತ್ ನಿಯೋಜನೆಯನ್ನು ಮಾಡುವ ಮೂಕಲ ಅರೇಬಿಯನ್ ಸಮುದ್ರದಲ್ಲಿ ಭಾರತವು ಪಾಕಿಸ್ಥಾನದ ಮೇಲೆ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಈ ಮೂಲಕ ಪಾಕಿಸ್ಥಾನಕ್ಕೆ ಮತ್ತೊಂದು ಕಠಿಣ ಸಂದೇಶವನ್ನು ರವಾನೆ ಮಾಡಿದೆ. ಭವಿಷ್ಯದಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಕಠಿಣ ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದೆ ಇರುವುದರಿಂದ ಪ್ರಾಬಲ್ಯ ಮೆರೆಯುವುದು ಭಾರತಕ್ಕೆ ಅವಶ್ಯಕ. ಭಾರೀ ಪ್ರಮಾಣದ ಪ್ರದರ್ಶನದೊಂದಿಗೆ ಭಾರತೀಯ ನೌಕಾಪಡೆಯು ಸಮುದ್ರದಲ್ಲಿನ ತನ್ನ ಪ್ರಾಬಲ್ಯವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲು ಸಜ್ಜಾಗಿದೆ.
ಈ ವರ್ಷದ ಆರಂಭದಲ್ಲಿ ಬಾಲಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯು ಬಾಂಬ್ ಸ್ಫೋಟಿಸಿದ ಎರಡು ದಿನಗಳ ನಂತರ ಪಾಕಿಸ್ಥಾನ ತನ್ನ ಎಲ್ಲಾ ನೌಕಾಪಡೆಯನ್ನು ತನ್ನ ಕರಾವಳಿಯಲ್ಲಿ ನಿಯೋಜಿಸಿತ್ತು. ಪಾಕಿಸ್ಥಾನ ನೌಕಾಪಡೆಯು ಅರೇಬಿಯನ್ ಸಮುದ್ರದ ಕರಾಚಿ, ಒರ್ಮಾರಾ ಮತ್ತು ಗ್ವಾದರ್ ಬಂದರುಗಳಲ್ಲಿ ನಿಯೋಜನೆಗೊಂಡಿತ್ತು. ಭಾರತೀಯ ನೌಕಾಪಡೆಯು ಕೂಡ ತನ್ನ ಮುಂಚೂಣಿಯಪಡೆಗಳನ್ನು ನಿಯೋಜಿಸಿತ್ತು. ಭಾರತದ ಈ ನಿಯೋಜನೆಯು ವಿಮಾನವಾಹಕ ನೌಕೆ, ಪರಮಾಣು-ಚಾಲಿತ ದಾಳಿ ಜಲಾಂತರ್ಗಾಮಿ ನೌಕೆ ಮತ್ತು ಹಲವಾರು ಯುದ್ಧನೌಕೆಗಳನ್ನು ಒಳಗೊಂಡಿತ್ತು. ಇದು ಎಷ್ಟರ ಮಟ್ಟಿಗೆ ಪಾಕಿಸ್ಥಾನದ ಮೇಲೆ ಪ್ರಭಾವ ಬೀರಿತ್ತೆಂದರೆ, ಚೀನಾದ ನೌಕಾಪಡೆಯ 70 ನೇ ವಾರ್ಷಿಕೋತ್ಸವದ ಪರೇಡ್ ನಲ್ಲಿ ಭಾಗವಹಿಸುವ ನಿರ್ಧಾರದಿಂದಲೇ ಪಾಕಿಸ್ಥಾನ ಹೊರಬಂತು.
ಅರೇಬಿಯನ್ ಸಮುದ್ರದಲ್ಲಿ ಭಾರತವು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದೆ, ಆದರೆ ಪಾಕಿಸ್ಥಾನ ಮಾತ್ರ ಒಂದು ಸಾಮಾನ್ಯ ಯುದ್ಧ ನೌಕೆಯನ್ನು ನಿರ್ವಹಿಸಲು ಕೂಡ ಹೆಣಗಾಡುತ್ತಿದೆ. ಇದು ಪಾಕಿಸ್ಥಾನದ ನೌಕಾ ಸಾಮರ್ಥ್ಯಗಳಲ್ಲಿನ ದೊಡ್ಡ ಕೊರತೆಯನ್ನು ಬಹಿರಂಗಪಡಿಸಿದೆ.
ನೌಕಾ ಪ್ರಾಬಲ್ಯವನ್ನು ಪಡೆಯಲು ಉತ್ಸುಕರಾಗಿರುವ ಚೀನಾಕ್ಕೂ ಭಾರತದ ಸಮರಾಭ್ಯಾಸ ಬಲವಾದ ಸಂದೇಶವನ್ನು ರವಾನಿಸಲಿದೆ. ಚೀನಾ ತನ್ನ ನೌಕಾಪಡೆಯನ್ನು ಸಂಪೂರ್ಣ ಸಮುದ್ರದ ನೌಕಾಪಡೆಯಾಗಿ ಪರಿವರ್ತಿಸುವ ದೀರ್ಘಕಾಲದ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ, ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಯೋಜಿಸುತ್ತಿದೆ. ಭಾರತವನ್ನು ಸುತ್ತುವರಿಯಲು ಮತ್ತು ಈ ಪ್ರದೇಶದಲ್ಲಿ ಭಾರತೀಯ ಪ್ರಭಾವವನ್ನು ಹೊಂದಿರುವ ಆಯಕಟ್ಟಿನ ಸ್ಥಳಗಳಲ್ಲಿರುವ ದ್ವೀಪಗಳಲ್ಲಿ ತನ್ನ ‘ಸ್ಟ್ರಿಂಗ್ ಆಫ್ ಪರ್ಲ್ಸ್’ ಸಿದ್ಧಾಂತದಂತೆ ಮಿಲಿಟರಿ ಅಥವಾ ವಾಣಿಜ್ಯ ಅಂಶಗಳನ್ನು ಹೆಚ್ಚಿಸುತ್ತಿದೆ. ಆದರೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಉಪಸ್ಥಿತಿಯನ್ನು ಎದುರಿಸಲು ಭಾರತ ಈಗಾಗಲೇ ಸಜ್ಜಾಗಿದೆ, ತನ್ನ ನೌಕಾ ಬಲವನ್ನು ಬಲಿಷ್ಠವಾಗಿ ಅದು ಪ್ರದರ್ಶಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.