ದೇಶದಲ್ಲಿ ಅಂಚೆ ವ್ಯವಸ್ಥೆಯನ್ನು ನಿರ್ವಹಿಸುವ ಇಂಡಿಯಾ ಪೋಸ್ಟ್ ಅಥವಾ ಡಿಪಾರ್ಟ್ಮೆಂಟ್ ಆಫ್ ಪೋಸ್ಟ್ ದೇಶದಲ್ಲಿ ಹಲವಾರು ರೀತಿಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಇಂಡಿಯಾ ಪೋಸ್ಟ್ ವಿಭಿನ್ನ ಬಡ್ಡಿದರಗಳೊಂದಿಗೆ ಒಂಬತ್ತು ಉಳಿತಾಯ ಯೋಜನೆಗಳನ್ನು ಒದಗಿಸುತ್ತಿದೆ. ಈ ಯೋಜನೆಗಳನ್ನು ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಎಂದು ಕರೆಯಲಾಗುತ್ತದೆ. ಇಂಡಿಯಾ ಪೋಸ್ಟ್ ನೀಡುವ ಹಲವು ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್ಸಿಎಸ್ಎಸ್) ಕೂಡ ಒಂದಾಗಿದ್ದು, ಇದು 8.6% ಬಡ್ಡಿದರದಲ್ಲಿ ರಿಟರ್ನ್ಸ್ ಅನ್ನು ನೀಡುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್) ಖಾತೆಯನ್ನು 60 ವರ್ಷ ಅಥವಾ ಮೇಲ್ಪಟ್ಟ ವ್ಯಕ್ತಿಗಳು ತೆರೆಯಬಹುದು. ಆದರೂ, ಯಾವುದೇ ವ್ಯಕ್ತಿಯ ವಯಸ್ಸು 55 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅಂದರೆ 60 ವರ್ಷಕ್ಕಿಂತ ಕಡಿಮೆಯಾಗಿದ್ದರೆ ಮತ್ತು ಪಿಂಚಣಿ ಸಹಿತ ಅಥವಾ ವಿಆರ್ಎಸ್ (ಸ್ವಯಂಪ್ರೇರಿತ ನಿವೃತ್ತಿ ಯೋಜನೆ) ಅಡಿಯಲ್ಲಿ ನಿವೃತ್ತಿ ಹೊಂದಿದ್ದರೆ, ನಿವೃತ್ತಿ ಪ್ರಯೋಜನವನ್ನು ಪಡೆದ ಒಂದು ತಿಂಗಳೊಳಗೆ ಖಾತೆ ತೆರೆಯುವ ಷರತ್ತಿಗೆ ಒಳಪಟ್ಟು ಈ ಖಾತೆಯನ್ನು ತೆರೆಯಬಹುದು ಮತ್ತು ಇದರ ಮೊತ್ತವು ನಿವೃತ್ತಿ ಪ್ರಯೋಜನಗಳ ಪ್ರಮಾಣವನ್ನು ಮೀರಿರಬಾರದು.
ಈ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳ ವಿವರ ಇಲ್ಲಿದೆ :
1. ಕೊಡುಗೆ: ಎಸ್ಸಿಎಸ್ಎಸ್ ಖಾತೆ ತೆರೆಯಲು ಬೇಕಾದ ಕನಿಷ್ಠ ಮೊತ್ತ 1,000 ರೂ. ಮತ್ತು ಗರಿಷ್ಠ ಮೊತ್ತ 15 ಲಕ್ಷ ರೂಪಾಯಿ. ಮೊತ್ತವು ಒಂದು ಲಕ್ಷ ರೂ.ಗಿಂತ ಕಡಿಮೆಯಿದ್ದರೆ ಹಣವನ್ನು ನಗದು ಮೂಲಕ ತೆರೆಯಬಹುದು. ಆದರೆ, ಮೊತ್ತವು 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದ್ದರೆ, ಚೆಕ್ ಅನ್ನು ಠೇವಣಿ ಮಾಡಬೇಕಾಗುತ್ತದೆ. ಖಾತೆಗೆ ನಾವು ಕೊಡುವ ಚೆಕ್ನ ದಿನಾಂಕವೇ ಖಾತೆಯನ್ನು ತೆರೆಯುವ ದಿನಾಂಕವಾಗಿರುತ್ತದೆ. ಖಾತೆದಾರರು ಖಾತೆಯಲ್ಲಿ ಗರಿಷ್ಠ 1,000 ರೂ.ಗಳಿಂದ 15 ಲಕ್ಷ ಮೀರದಂತೆ ಹಣವನ್ನು ಠೇವಣಿ ಮಾಡಬಹುದು. ವಾರ್ಷಿಕ ಶೇ. 8.6ರಷ್ಟು ಬಡ್ಡಿದರವನ್ನು ಇದು ನೀಡುತ್ತದೆ.
2. ಬಡ್ಡಿದರಗಳು: ಅಂಚೆ ಕಚೇರಿ ಹಿರಿಯ ನಾಗರಿಕ ಉಳಿತಾಯ ಯೋಜನೆ ಬಡ್ಡಿದರವನ್ನು ತ್ರೈಮಾಸಿಕ ಆಧಾರದ ಮೇಲೆ ಸರ್ಕಾರ ಪರಿಷ್ಕರಿಸುತ್ತದೆ. ಪೋಸ್ಟ್ ಆಫೀಸ್ ಹಿರಿಯ ನಾಗರಿಕ ಉಳಿತಾಯ ಯೋಜನೆ ಬಡ್ಡಿದರ 2019ಕ್ಕೆ ಪ್ರಸ್ತುತ ವಾರ್ಷಿಕ ಶೇಕಡಾ 8.6 ಆಗಿದೆ. ಮಾರ್ಚ್ 31, ಸೆಪ್ಟೆಂಬರ್ 30, ಡಿಸೆಂಬರ್ 31 ರ ಠೇವಣಿ ದಿನಾಂಕದಿಂದ ಮೊದಲ ಬಾರಿಗೆ ಬಡ್ಡಿ ಪಾವತಿಗೆ ಅರ್ಹವಾಗಿರುತ್ತದೆ ಮತ್ತು ನಂತರ, ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30 ಮತ್ತು ಡಿಸೆಂಬರ್ 31 ರಂದು ಬಡ್ಡಿಯನ್ನು ಪಾವತಿಸಲಾಗುತ್ತದೆ.
ಎಸ್ಸಿಎಸ್ಎಸ್ ಖಾತೆಗಳ ವಿಷಯದಲ್ಲಿ, ತ್ರೈಮಾಸಿಕ ಬಡ್ಡಿಯನ್ನು ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಜನವರಿ 1ರ ಕೆಲಸದ ದಿನದಂದು ಪಾವತಿಸಲಾಗುತ್ತದೆ. ಎಲ್ಲಾ ಸಿಬಿಎಸ್ ಅಂಚೆ ಕಚೇರಿಗಳಲ್ಲೂ ಇದು ಅನ್ವಯವಾಗುತ್ತದೆ. ಸಿಬಿಎಸ್ ಅಂಚೆ ಕಚೇರಿಗಳಲ್ಲಿನ ಎಸ್ಸಿಎಸ್ಎಸ್ ಖಾತೆಗಳ ತ್ರೈಮಾಸಿಕ ಬಡ್ಡಿಯನ್ನು ಯಾವುದೇ ಸಿಬಿಎಸ್ ಅಂಚೆ ಕಚೇರಿಗಳಲ್ಲಿನ ಉಳಿತಾಯ ಖಾತೆಗೆ ಜಮಾ ಮಾಡಬಹುದು ಎಂಬುದು ಗಮನಾರ್ಹವಾಗಿದೆ.
3. ಮೆಚ್ಯೂರಿಟಿ: ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮೆಚ್ಯೂರಿಟಿ ಅವಧಿ ಐದು ವರ್ಷಗಳು. ಆದರೂ, ಮೆಚ್ಯೂರಿಟಿ ನಂತರ, ನಿಗದಿತ ಸ್ವರೂಪದಲ್ಲಿ ಅರ್ಜಿಯನ್ನು ನೀಡುವ ಮೂಲಕ ಖಾತೆಯನ್ನು ಮೆಚ್ಯೂರಿಟಿಗೊಂಡ ಒಂದು ವರ್ಷದೊಳಗೆ ಮೂರು ವರ್ಷಗಳವರೆಗೆ ಮತ್ತೆ ವಿಸ್ತರಿಸಬಹುದು. ಅಂತಹ ಸಂದರ್ಭಗಳಲ್ಲಿ, ಯಾವುದೇ ಕಡಿತವಿಲ್ಲದೆ ಒಂದು ವರ್ಷದ ವಿಸ್ತರಣೆಯ ಅವಧಿ ಮುಗಿದ ನಂತರ ಯಾವುದೇ ಸಮಯದಲ್ಲಿ ಬೇಕಾದರೂ ಖಾತೆಯನ್ನು ಕ್ಲೋಸ್ ಮಾಡಬಹುದಾಗಿದೆ.
4. ಆದಾಯ ತೆರಿಗೆ ಲಾಭ: ಯೋಜನೆಯಡಿ ಮಾಡಿದ ಹೂಡಿಕೆಗಳು ಆದಾಯ ತೆರಿಗೆ ಕಡಿತಕ್ಕೆ ಅರ್ಹವಾಗಿವೆ ಅಂದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆಯು ಆದಾಯ ತೆರಿಗೆ ಪ್ರಯೋಜನಕ್ಕೆ ಅರ್ಹತೆ ಪಡೆಯುತ್ತದೆ. ಬಡ್ಡಿ ಮೊತ್ತವು ವಾರ್ಷಿಕ 10,000 ರೂ.ಗಿಂತ ಹೆಚ್ಚಿದ್ದರೆ ಟಿಡಿಎಸ್ ಅನ್ನು ಬಡ್ಡಿ ಮೂಲದಲ್ಲಿ ಕಡಿತಗೊಳಿಸಲಾಗುತ್ತದೆ.
5. ನಾಮನಿರ್ದೇಶನ ಮತ್ತು ಜಂಟಿ ಖಾತೆ: ಠೇವಣಿದಾರನು ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯದಂತೆ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸಬಹುದು ಅಥವಾ ಸಂಗಾತಿಯೊಂದಿಗೆ (ಪತಿ/ಪತ್ನಿ) ಜಂಟಿಯಾಗಿ ಖಾತೆಯನ್ನು ನಿರ್ವಹಿಸಬಹುದು. ಜಂಟಿ ಖಾತೆಯನ್ನು ಸಂಗಾತಿಯೊಂದಿಗೆ ಮಾತ್ರ ತೆರೆಯಬಹುದು ಮತ್ತು ಜಂಟಿ ಖಾತೆಯ ಮೊದಲ ಠೇವಣಿದಾರನು ಹೂಡಿಕೆದಾರ ಆಗಿರುತ್ತಾನೆ. ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು.
ನಾಮನಿರ್ದೇಶನ ಸೌಲಭ್ಯವು ಖಾತೆಯನ್ನು ತೆರೆಯುವ ಸಮಯದಲ್ಲಿ ಮತ್ತು ಖಾತೆಯನ್ನು ತೆರೆದ ನಂತರವೂ ಲಭ್ಯವಿದೆ. ಅಲ್ಲದೇ, ಎಲ್ಲಾ ಖಾತೆಗಳಲ್ಲಿ ಠೇವಣಿಯನ್ನು ಇಡುವ ಮೂಲಕ ಮೂಲಕ ಗರಿಷ್ಠ ಹೂಡಿಕೆ ಮಿತಿಗೆ ಒಳಪಟ್ಟು ಯಾವುದೇ ಅಂಚೆ ಕಚೇರಿಯಲ್ಲಿ ಎಷ್ಟು ಖಾತೆಗಳನ್ನಾದರೂ ತೆರೆಯಬಹುದಾಗಿದೆ. ಆಟೋ ಕ್ರೆಡಿಟ್ ಮೂಲಕ ಪಿಡಿಸಿಗಳು ಅಥವಾ ಮನಿ ಆರ್ಡರ್ ಬಳಸಿ ಅದೇ ಪೋಸ್ಟ್ ಆಫೀಸಿನಲ್ಲಿರುವ ಉಳಿತಾಯ ಖಾತೆಗೆ ಬಡ್ಡಿ ಮೊತ್ತ ಬಂದು ಬೀಳುವಂತೆ ಮಾಡಬಹುದು.
6. ಅವಧಿಪೂರ್ವ ಹಿಂಪಡೆಯುವಿಕೆ: ಅಂಚೆ ಕಚೇರಿಯ ಉಳಿತಾಯ ಯೋಜನೆಯಡಿ, ಖಾತೆ ತೆರೆದ ಒಂದು ವರ್ಷಗಳ ಬಳಿಕ ಠೇವಣಿಯ ಶೇಕಡಾ 1.5 ಕ್ಕೆ ಸಮನಾದ ಮೊತ್ತವನ್ನು ಕಡಿತಗೊಳಿಸಿದ ನಂತರ ಅವಧಿ ಪೂರ್ವವಾಗಿ ಖಾತೆಯನ್ನು ಮುಚ್ಚಲು ಅನುಮತಿಸಲಾಗುತ್ತದೆ. 2 ವರ್ಷಗಳ ನಂತರ, ಖಾತೆಯನ್ನು ಹಿಂಪಡೆದರೆ ಠೇವಣಿಯ ಶೇಕಡಾ 1 ರಷ್ಟು ಕಡಿತಗೊಳಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.