ನವದೆಹಲಿ: ರಿಯೊ ಡಿ ಜನೈರೊದಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಭಾರತೀಯ ಶೂಟಿಂಗ್ ಪಟುಗಳು ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಮನು ಭಕೇರ್ ಮತ್ತು ಸೌರಭ್ ಚೌಧರಿ ಮಿಶ್ರ ಅವರು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬಂಗಾರದ ಪದಕವನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಯಶಸ್ವಿನಿ ದೇಶ್ವಾಲ್ ಮತ್ತು ಅಭಿಷೇಕ್ ವರ್ಮಾ ಬೆಳ್ಳಿ ಗೆದ್ದಿದ್ದಾರೆ. ಪಂದ್ಯಾವಳಿಯ ಅಂತಿಮ ದಿನದಂದು ಭಾರತವು ಗರಿಷ್ಠ ಪದಕಗಳನ್ನು ಪಡೆದುಕೊಂಡಿದೆ.
ಇದೇ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ನಲ್ಲಿ ವಿಶ್ವದ ನಂ.1 ಆಟಗಾರ ಅಪುರ್ವಿ ಚಂಡೇಲಾ ಅವರು ದೀಪಕ್ ಕುಮಾರ್ ಅವರೊಂದಿಗೆ ಜಂಟಿಯಾಗಿ ಭಾರತಕ್ಕೆ ನಾಲ್ಕನೇ ಚಿನ್ನವನ್ನು ನೀಡಿದ್ದರು. ಮಿಶ್ರ ಏರ್ ರೈಫಲ್ ಸ್ಪರ್ಧೆಯಲ್ಲಿ ಈ ಜೋಡಿ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ.
ಜೂನಿಯರ್ ವಿಶ್ವಕಪ್ ಸೇರಿದಂತೆ ಈ ವರ್ಷದ ಎಲ್ಲಾ ನಾಲ್ಕು ಐಎಸ್ಎಸ್ಎಫ್ ವಿಶ್ವಕಪ್ ಹಂತಗಳಲ್ಲಿಯೂ ಭಾರತದ ಅಭೂತಪೂರ್ವ ಅಗ್ರ ಸ್ಥಾನವನ್ನು ಗಳಿಸಿದೆ.
ಏರ್ ಪಿಸ್ತೂಲ್ ಫೈನಲ್ನಲ್ಲಿ, ಮನು ಬಕೇರ್ ಮತ್ತು ಸೌರಭ್ ಚೌಧರಿ ಜೋಡಿ ಯಶಸ್ವಿನಿ ಸಿಂಗ್ ದೇಸ್ವಾಲ್ ಮತ್ತು ಅಭಿಷೇಕ್ ವರ್ಮಾ ಅವರ ವಿರುದ್ಧ 17-15 ರಿಂದ ಮೇಲುಗೈ ಸಾಧಿಸಿತು.
ಈ ವರ್ಷ ನಾಲ್ಕು ಐಎಸ್ಎಸ್ಎಫ್ ಮಿಶ್ರ ತಂಡ ಏರ್ ಪಿಸ್ತೂಲ್ ವಿಶ್ವಕಪ್ ಚಿನ್ನವನ್ನು ಗೆದ್ದಿರುವ ಮನು ಮತ್ತು ಸೌರಭ್, ಫೈನಲ್ನ ವಿವಿಧ ಹಂತಗಳಲ್ಲಿ 3-9, ನಂತರ 7-13 ಮತ್ತು ನಂತರ ಅಂತಿಮವಾಗಿ 9-15ರಲ್ಲಿ ಅಂಕಗಳ ಮೂಲಕ ಜಯಿಸಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಐದು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚುಗಳೊಂದಿಗೆ ಭಾರತ ಪದಕಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಈ ವರ್ಷದ ಎಲ್ಲಾ ನಾಲ್ಕು ಐಎಸ್ಎಸ್ಎಫ್ ರೈಫಲ್ / ಪಿಸ್ತೂಲ್ ವಿಶ್ವಕಪ್ಗಳಲ್ಲೂ ಅಗ್ರಸ್ಥಾನವನ್ನು ಪಡೆದು ಭಾರತ ಬೀಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.