ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಮಾಜವಾದಿ ನಾಯಕ ಅಜಂಖಾನ್ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಜಯಪ್ರದ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ಯೋಗಿ ತೀವ್ರವಾಗಿ ಖಂಡಿಸಿದ್ದಾರೆ.
ಶುಕ್ರವಾರ ಹರ್ದೋಯಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರಕಾರವು ಅಜಂ ಖಾನ್ ಅಂತಹ ವ್ಯಕ್ತಿಗಳಿಗಾಗಿಯೇ ಆ್ಯಂಟಿ ರೋಮಿಯೋ ಸ್ಕ್ವ್ಯಾಡ್ ಅನ್ನು ರಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಅದಕ್ಕೂ ಮುನ್ನ ಸಂಭಲ್ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಸಮಾಜವಾದಿಯ ಒಂದು ಜೀವಿ ರಾಂಪುರದಲ್ಲಿ ಬದುಕುತ್ತಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಕೆಟ್ಟದಾಗಿ ಅವರು ಮಾತನಾಡಿದ್ದಾರೆ, ಆದರೆ ಇಂದು ಮಾಯಾವತಿಯವರು, ಬಾಬಾ ಸಾಹೇಬ್ ಅವರಿಗೆ ಅವಮಾನ ಮಾಡಿದವರಿಗಾಗಿ ಮತ ಕೇಳುತ್ತಿದ್ದಾರೆ. ಮಾತೆಯರ ಮತ್ತು ಸಹೋದರಿಯರ ಬಗ್ಗೆಯೂ ಅವರು ಅತ್ಯಂತ ಕೆಟ್ಟ ಶಬ್ದಗಳನ್ನು ಪ್ರಯೋಗಿಸುತ್ತಿದ್ದಾರೆ ಎಂದರು.
ನಾನು ಧರ್ಮದ ಆಧಾರದಲ್ಲಿ ಎಂದಿಗೂ ಮತಯಾಚನೆ ಮಾಡಿಲ್ಲ ಎಂದು ಹೇಳಿದ ಯೋಗಿ, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಅದರ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು ಈ ದೇಶದ ಸಂಪನ್ಮೂಲದ ಮೇಲೆ ಮುಸ್ಲಿಮರಿಗೆ ಮೊದಲ ಅಧಿಕಾರವಿದೆ ಎಂದು ಹೇಳಿದ್ದರು. ಮಾಯಾವತಿಯವರು ಬಿಎಸ್ಪಿ ಮತ್ತು ಎಸ್ಪಿಗೇ ಮುಸ್ಲಿಂರು ಮತ ಹಾಕಬೇಕು ಎಂದು ಕರೆ ನೀಡಿದ್ದರು, ಆದರೆ ನಾನು ಯಾವತ್ತೂ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತ ಯಾಚನೆಯನ್ನು ಮಾಡಿಲ್ಲ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.